ವನರಂಗದಲ್ಲಿ ತುಮಕೂರಿನ ಜಿಗುರು ಪ್ರದರ್ಶಕ ಕಲೆಗಳ ಕೇಂದ್ರದ ಕಲಾವಿದರು ‘ರುಮು ರುಮು ರುಮು’ ನಾಟಕ ಪ್ರಸ್ತುತಪಡಿಸಿದರು.
ತೆಲಂಗಾಣದ ಲಂಬಾಡಿ ನೃತ್ಯದ ಝಲಕ್
‘ಭಾರತದ ಆರ್ಥಿಕತೆಯ ಅಡಿಪಾಯ’
‘ಅಂಬೇಡ್ಕರ್ ಆರ್ಥಿಕ ಚಿಂತನೆಗಳು ಅನುಷ್ಠಾನ’ ಕುರಿತು ಮಾತನಾಡಿದ ಆರ್ಥಿಕ ತಜ್ಞ ಪ್ರೊ.ಕೆ.ಎಸ್.ಚಲಂ ‘ರೂಪಾಯಿ ಸಮಸ್ಯೆ ಕುರಿತ ಪ್ರಬಂಧವು ಆಧುನಿಕ ಭಾರತದ ಆರ್ಥಿಕತೆಯ ಅಡಿಪಾಯವನ್ನು ಹಾಕಿತು. ಗೋಲ್ಡ್ ಸ್ಟ್ಯಾಂಡರ್ಡ್ ಲೀಗಲ್ ಟೆಂಡರ್ ವಿದೇಶಿ ವಿನಿಮಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿತು. ರಿಸರ್ವ್ ಬ್ಯಾಂಕ್ ಸ್ಥಾಪನೆಗೂ ಕಾರಣವಾಯಿತು’ ಎಂದು ಸ್ಮರಿಸಿದರು. ಕೋಮುವಾದದ ಪಾಠಶಾಲೆಗಳು: ‘ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಕೋಮುವಾದದ ಪಾಠಶಾಲೆಗಳಾಗುತ್ತಿವೆ. ಆ್ಯಂಟನಿಯೊ ಗ್ರಾಮ್ಶಿ ಹೇಳಿದ ಸಾಂಸ್ಕೃತಿಕ ಯಜಮಾನೀಕರಣ ಪ್ರತಿಪಾದಿಸುವ ಕೇಂದ್ರಗಳಾಗುತ್ತಿವೆ’ ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು. ‘ತಳ ಸಮುದಾಯಗಳ ಸಾಂಸ್ಕೃತಿಕ ಪ್ರತಿರೋಧ’ ಕುರಿತು ಮಾತನಾಡಿದರು. ಪ್ರೊ.ಟಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
‘ವಸಾಹತೀಕರಣ ಜೀವಂತ’
‘ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ’ ಕುರಿತು ಬೈಲುಕುಪ್ಪೆಯ ಮಾತನಾಡಿದ ಅವರು ‘ಶಿಕ್ಷಣ ಸಂಘಟನೆ ಹೋರಾಟ ಎಂಬ ಅಂಬೇಡ್ಕರ್ ತತ್ವಗಳು ಆಧ್ಯಾತ್ಮದ ಕ್ರಾಂತಿದೀಪಗಳಾಗಿವೆ’ ಎಂದರು. ವಿಮರ್ಶಕ ನಟರಾಜ ಬೂದಾಳು ಮಾತನಾಡಿ ‘ದೇಶದ ಎಲ್ಲೆಲ್ಲೂ ಕಾಲೊನಿಗಳಿವೆ. ಕೇವಲ ದಲಿತರ ಕಾಲೊನಿಗಳಲ್ಲ. ತುಳಿಯವವರು ತುಳಿಸಿಕೊಳ್ಳುವವರ ಕಾಲೊನಿಗಳಿವೆ. ದಕ್ಷಿಣ ಭಾರತವು ಉತ್ತರ ವೈದಿಕ ಭಾರತಕ್ಕೆ ಕಾಲೊನಿಯಾಗಿದೆ. ವಸಾಹತೀಕರಣ ಇನ್ನೂ ಜೀವಂತವಾಗಿದೆ’ ಎಂದರು.
ಬಿರಿಯಾನಿ ಸವಿ
ವಿಚಾರ ಸಂಕಿರಣದಲ್ಲಿ ಮಧ್ಯಾಹ್ನ ಪಾಲ್ಗೊಂಡಿದ್ದವರಿಗೆ ಬಿರಿಯಾನಿ ಊಟ ನೀಡಲಾಗಿತ್ತು. ‘ಅಂಬೇಡ್ಕರ್ ವಿಚಾರ ಸಂಕಿರಣ ಏರ್ಪಡಿಸಿ ಬಹುಜನರ ಆಹಾರ ಸಂಸ್ಕೃತಿಯೇ ಇಲ್ಲವಾದರೆ ಹೇಗೆ?’ ಎಂದು ಶನಿವಾರ ಚಿಂತಕರು ಪ್ರಶ್ನಿಸಿದ್ದರು. ನಿರ್ದೇಶಕ ಸತೀಶ್ ತಿಪಟೂರು ಬಿರಿಯಾನಿ ನೀಡುವುದಾಗಿ ಹೇಳಿದ್ದರು. ಭಾನುವಾರ ಮಧ್ಯಾಹ್ನ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದವರಿಗೆ ಚಿಕನ್ ಬಿರಿಯಾನಿ ಕಬಾಬ್ ಮೊಟ್ಟೆ ಸೌತೆಕಾಯಿ ಮೊಸರು ಬಜ್ಜಿ ಊಟ ಬಡಿಸಲಾಯಿತು.
ಕಲಾಮಂದಿರದಲ್ಲಿ ಗಿನ್ನಿಮಾಹಿ ಅವರ ಗಾಯನ ತನ್ಮಯ