<p><strong>ಮೈಸೂರು:</strong> ಪೌರಕಾರ್ಮಿಕರಿಗೆ ಅವರು ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಮೇರೆಗೆ ಇಲ್ಲಿನ ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್ ಆಸೀಫ್ ಅಮಾನತುಗೊಳಿಸಿದ್ದಾರೆ.</p><p>ಆರೋಗ್ಯ ವಿಭಾಗದ ಪ್ರಥಮದರ್ಜೆ ಸಹಾಯಕಿಯರಾದ ಕೆ.ಎಲ್.ಸಿ. ಪಾಪ, ಎಂ. ಪುಷ್ಪಾವತಿ ಹಾಗೂ ದ್ವಿತೀಯದರ್ಜೆ ಸಹಾಯಕಿ ಎಚ್.ಸಿ. ಅನಿತಾ ಅಮಾನತುಗೊಂಡವರು.</p><p>ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಕೆಲವು ಪೌರಕಾರ್ಮಿಕರು ಕೆಲಸಕ್ಕೆ ಗೈರುಹಾಜರಾಗಿದ್ದರು. ನಿಯಮದ ಪ್ರಕಾರ ಗೈರುಹಾಜರಿಗೆ ವೇತನ ಕಡಿತಗೊಳಿಸಿ ಪಾವತಿಸಬೇಕಾಗಿತ್ತು. ಆದರೆ, ಅವರಿಗೆ ಪೂರ್ಣ ಪ್ರಮಾಣದ ವೇತನ ನೀಡಿರುವುದು, ಕರ್ತವ್ಯ ಲೋಪ ಎಸಗಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಕಾರಣದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.</p><p>ಕೆ.ಎಲ್.ಸಿ. ಪಾಪ ಸೆಪ್ಟೆಂಬರ್ನಲ್ಲಿ ₹4,25,273, ಅಕ್ಟೋಬರ್ನಲ್ಲಿ ₹ 4,07,793 ಹಾಗೂ ನವೆಂಬರ್ನಲ್ಲಿ ₹ 5,25,455 ಹೆಚ್ಚುವರಿಯಾಗಿ ಪಾವತಿದ್ದಾರೆ. ಅಂತೆಯೇ ಪುಷ್ಪಾವತಿ ಸೆಪ್ಟೆಂಬರ್ನಲ್ಲಿ ₹ 10,883, ಅಕ್ಟೋಬರ್ನಲ್ಲಿ ₹ 42,916, ನವೆಂಬರ್ನಲ್ಲಿ ₹ 63,282, ಅನಿತಾ ಸೆಪ್ಟೆಂಬರ್ನಲ್ಲಿ ₹ 83,566, ಅಕ್ಟೋಬರ್ನಲ್ಲಿ ₹ 36,370 ಹಾಗೂ ನವೆಂಬರ್ನಲ್ಲಿ ₹ 34,769 ಪಾವತಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಪೌರಕಾರ್ಮಿಕರಿಗೆ ಅವರು ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಮೇರೆಗೆ ಇಲ್ಲಿನ ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್ ಆಸೀಫ್ ಅಮಾನತುಗೊಳಿಸಿದ್ದಾರೆ.</p><p>ಆರೋಗ್ಯ ವಿಭಾಗದ ಪ್ರಥಮದರ್ಜೆ ಸಹಾಯಕಿಯರಾದ ಕೆ.ಎಲ್.ಸಿ. ಪಾಪ, ಎಂ. ಪುಷ್ಪಾವತಿ ಹಾಗೂ ದ್ವಿತೀಯದರ್ಜೆ ಸಹಾಯಕಿ ಎಚ್.ಸಿ. ಅನಿತಾ ಅಮಾನತುಗೊಂಡವರು.</p><p>ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಕೆಲವು ಪೌರಕಾರ್ಮಿಕರು ಕೆಲಸಕ್ಕೆ ಗೈರುಹಾಜರಾಗಿದ್ದರು. ನಿಯಮದ ಪ್ರಕಾರ ಗೈರುಹಾಜರಿಗೆ ವೇತನ ಕಡಿತಗೊಳಿಸಿ ಪಾವತಿಸಬೇಕಾಗಿತ್ತು. ಆದರೆ, ಅವರಿಗೆ ಪೂರ್ಣ ಪ್ರಮಾಣದ ವೇತನ ನೀಡಿರುವುದು, ಕರ್ತವ್ಯ ಲೋಪ ಎಸಗಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಕಾರಣದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.</p><p>ಕೆ.ಎಲ್.ಸಿ. ಪಾಪ ಸೆಪ್ಟೆಂಬರ್ನಲ್ಲಿ ₹4,25,273, ಅಕ್ಟೋಬರ್ನಲ್ಲಿ ₹ 4,07,793 ಹಾಗೂ ನವೆಂಬರ್ನಲ್ಲಿ ₹ 5,25,455 ಹೆಚ್ಚುವರಿಯಾಗಿ ಪಾವತಿದ್ದಾರೆ. ಅಂತೆಯೇ ಪುಷ್ಪಾವತಿ ಸೆಪ್ಟೆಂಬರ್ನಲ್ಲಿ ₹ 10,883, ಅಕ್ಟೋಬರ್ನಲ್ಲಿ ₹ 42,916, ನವೆಂಬರ್ನಲ್ಲಿ ₹ 63,282, ಅನಿತಾ ಸೆಪ್ಟೆಂಬರ್ನಲ್ಲಿ ₹ 83,566, ಅಕ್ಟೋಬರ್ನಲ್ಲಿ ₹ 36,370 ಹಾಗೂ ನವೆಂಬರ್ನಲ್ಲಿ ₹ 34,769 ಪಾವತಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>