ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯ; ₹1,72 ಕೋಟಿ ಆದಾಯ

Published 14 ಮೇ 2024, 15:32 IST
Last Updated 14 ಮೇ 2024, 15:32 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ದ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಮಂಗಳವಾರ ಹುಂಡಿಗಳ ಏಣಿಕೆ ಕಾರ್ಯ ನಡೆದಿದ್ದು, 35 ಹುಂಡಿಗಳಿಂದ ₹1.72 ಕೋಟಿ ಆದಾಯ ದೊರೆತಿದೆ.

₹1,72,85,296 ನಗದು, 92 ಗ್ರಾಂ ಚಿನ್ನ, 3.5 ಕೆ.ಜಿ ಬೆಳ್ಳಿ ಹಾಗೂ 33 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ.

ಬ್ಯಾಂಕ್‌ ಆಫ್‌ ಬರೋಡ ಸಿಬ್ಬಂದಿಯಿಂದ ಎಣಿಕೆ ಕಾರ್ಯ ನಡೆಯಿತು. ಮಹಿಳಾ ಸ್ವಸಹಾಯ ಸಂಘದ 100ಕ್ಕೂ ಹೆಚ್ಚು ಸದಸ್ಯೆಯರು ಹಾಗೂ ದೇವಾಲಯದ ಸಿಬ್ಬಂದಿ ನೆರವಾದರು.

ದೇವಾಲಯದ ಇಒ ಜಗದೀಶ್‌ ಕುಮಾರ್‌, ಎಇಒ ಸತೀಶ್‌, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಧಾರ್ಮಿಕ ದತ್ತಿ ತಹಶೀಲ್ದಾರ್‌ ವಿದ್ಯುಲತಾ, ಬ್ಯಾಂಕ್‌ ಆಫ್‌ ಬರೋಡ ವ್ಯವಸ್ಥಾಪಕ ಕಾರ್ತಿಕ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT