<p><strong>ಮೈಸೂರು</strong>: ‘ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗವಾಗಿದೆ. 1943ರಲ್ಲಿ ನಿರ್ಮಿಸಲಾಗಿದ್ದು, ಇದರ ಆಧುನೀಕರಣದಿಂದ 1,800 ಎಕರೆ ಕೃಷಿ ಭೂಮಿಗೆ ನೀರು ದೊರೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.</p><p>ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಚಿದರವಳ್ಳಿಯಲ್ಲಿ ಶನಿವಾರ ₹ 91.33 ಕೋಟಿ ಮೊತ್ತದಲ್ಲಿ ತುರಗನೂರು, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p><p>‘ತುರಗನೂರು ನಾಲೆ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 70 ವರ್ಷಗಳ ನಂತರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕಾಮಗಾರಿ ರೂಪಿಸಿ ಅನುದಾನ ನೀಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.</p>.<p>‘ನಂಜಾಪುರ ಏತ ನೀರಾವರಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಇದ್ದ ತೊಡಕನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಹಾಗೂ ಎಲ್ಲಾ ಮೋಟಾರ್ಗಳನ್ನು ಹೊಸದಾಗಿ ಅಳವಡಿಸಲು ₹ 20 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು. </p><p>‘ತುರಗನೂರು ನಾಲಾ ಅಭಿವೃದ್ದಿ ಕಾಮಗಾರಿಯಿಂದ 100 ಕ್ಯೂಸೆಕ್ಗಿಂತ ಅಧಿಕ ಪ್ರಮಾಣದ ನೀರು ಸೋಸಲೆ ಹೋಬಳಿಯ ಗ್ರಾಮಗಳಿಗೆ ಲಭಿಸಲಿದೆ. ಇದರಿಂದಾಗಿ ಈ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ’ ಎಂದರು.</p><p>‘ನಂಜಾಪುರ, ಸಿ.ವಿ.ಕೊಪ್ಪಲು, ಹೊಸಕೊಪ್ಪಲು, ಚಿಮಿಲಿ, ಚಿಕ್ಕಕಲ್ಲುಣಿ, ಬೊಮ್ಮನಹಳ್ಳಿ, ಎಸ್. ದೊಡ್ಡಪುರ, ಕೆಂಪನಪುರ, ಸೀಗೋಡಿಪುರ, ಬೋಳೇಗೌಡನಹುಂಡಿ, ರಾಮೇಗೌಡನಪುರ, ವಡ್ಡರಕೊಪ್ಪಲು, ಮರಿಯೂರು, ಬಿ.ಬೆಟ್ಟಹಳ್ಳಿ, ಮೇಗಲಕೊಪ್ಪಲು, ಕುಂತನಹಳ್ಳಿ, ದೇವಿನಹಳ್ಳಿ, ಎಂ.ಎಲ್.ಹುಂಡಿ, ಕಳ್ಳಪುರ, ಬೂದಹಳ್ಳಿ, ಉತ್ಸಲಗೆರೆ, ಕನ್ನಾಯಕನಹಳ್ಳಿ, ತಮ್ಮಡಿಪುರ, ನಾಗಲಿಗೆರೆ, ಕೋಣಗಹಳ್ಳಿ, ಚಿಟ್ಟಗಯ್ಯನಕೊಪ್ಪಲು, ನೆರೆಗ್ಯಾತನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ಮುಡುಕನಪುರ, ಹಲವಾರ, ದೊಡ್ಡಬಾಗಿಲು, ಕೊಳತ್ತೂರು ಗ್ರಾಮಗಳಿಗೆ ಈ ಕಾಮಗಾರಿಯಿಂದ ಉಪಯೋಗ ಆಗಲಿದೆ’ ಎಂದು ತಿಳಿಸಿದರು.</p><p>‘ಪಂಚ ಗ್ಯಾರಂಟಿ ಯೋಜನೆಗಳು ಬಡವರ ಜೀವನ ಮಟ್ಟ ಸುಧಾರಿಸಿದೆ. ಬಡ ಮಹಿಳೆ ಹಾಗೂ ಕುಟುಂಬಕ್ಕೆ ತಿಂಗಳಿಗೆ ಒಟ್ಟಾರೆ ₹4ಸಾವಿರದಿಂದ ₹5ಸಾವಿರ ದೊರೆಯುತ್ತಿದೆ’ ಎಂದರು. </p><p>ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೈಮುಲ್ ಮಾಜಿ ಅಧ್ಯಕ್ಷ ಚಲುವರಾಜು, ಮುಖಂಡರಾದ ಎಚ್.ಸಿ. ಸಿದ್ಧಾರ್ಥ, ಸೋಸಲೆ ಮಹದೇವಸ್ವಾಮಿ, ವರದನಾಯಕ್, ಮಲ್ಲಿಕಾರ್ಜುನ, ಪರಶಿವಮೂರ್ತಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ತುರಗನೂರು ಶಾಖಾ ನಾಲೆಯು ವಿಶ್ವೇಶ್ವರಯ್ಯ ನಾಲೆಯ ಕೊನೆಯ ಭಾಗವಾಗಿದೆ. 1943ರಲ್ಲಿ ನಿರ್ಮಿಸಲಾಗಿದ್ದು, ಇದರ ಆಧುನೀಕರಣದಿಂದ 1,800 ಎಕರೆ ಕೃಷಿ ಭೂಮಿಗೆ ನೀರು ದೊರೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದರು.</p><p>ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಚಿದರವಳ್ಳಿಯಲ್ಲಿ ಶನಿವಾರ ₹ 91.33 ಕೋಟಿ ಮೊತ್ತದಲ್ಲಿ ತುರಗನೂರು, ಉಕ್ಕಲಗೆರೆ ಹಾಗೂ ಹಲವಾರ ಶಾಖಾ ನಾಲೆಗಳ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p><p>‘ತುರಗನೂರು ನಾಲೆ ಅಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. 70 ವರ್ಷಗಳ ನಂತರ ಅಭಿವೃದ್ಧಿಯ ಬಗ್ಗೆ ಆಸಕ್ತಿ ವಹಿಸಿ ಕಾಮಗಾರಿ ರೂಪಿಸಿ ಅನುದಾನ ನೀಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.</p>.<p>‘ನಂಜಾಪುರ ಏತ ನೀರಾವರಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಇದ್ದ ತೊಡಕನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಹಾಗೂ ಎಲ್ಲಾ ಮೋಟಾರ್ಗಳನ್ನು ಹೊಸದಾಗಿ ಅಳವಡಿಸಲು ₹ 20 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು. </p><p>‘ತುರಗನೂರು ನಾಲಾ ಅಭಿವೃದ್ದಿ ಕಾಮಗಾರಿಯಿಂದ 100 ಕ್ಯೂಸೆಕ್ಗಿಂತ ಅಧಿಕ ಪ್ರಮಾಣದ ನೀರು ಸೋಸಲೆ ಹೋಬಳಿಯ ಗ್ರಾಮಗಳಿಗೆ ಲಭಿಸಲಿದೆ. ಇದರಿಂದಾಗಿ ಈ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುವ ದಿನಗಳು ದೂರವಿಲ್ಲ’ ಎಂದರು.</p><p>‘ನಂಜಾಪುರ, ಸಿ.ವಿ.ಕೊಪ್ಪಲು, ಹೊಸಕೊಪ್ಪಲು, ಚಿಮಿಲಿ, ಚಿಕ್ಕಕಲ್ಲುಣಿ, ಬೊಮ್ಮನಹಳ್ಳಿ, ಎಸ್. ದೊಡ್ಡಪುರ, ಕೆಂಪನಪುರ, ಸೀಗೋಡಿಪುರ, ಬೋಳೇಗೌಡನಹುಂಡಿ, ರಾಮೇಗೌಡನಪುರ, ವಡ್ಡರಕೊಪ್ಪಲು, ಮರಿಯೂರು, ಬಿ.ಬೆಟ್ಟಹಳ್ಳಿ, ಮೇಗಲಕೊಪ್ಪಲು, ಕುಂತನಹಳ್ಳಿ, ದೇವಿನಹಳ್ಳಿ, ಎಂ.ಎಲ್.ಹುಂಡಿ, ಕಳ್ಳಪುರ, ಬೂದಹಳ್ಳಿ, ಉತ್ಸಲಗೆರೆ, ಕನ್ನಾಯಕನಹಳ್ಳಿ, ತಮ್ಮಡಿಪುರ, ನಾಗಲಿಗೆರೆ, ಕೋಣಗಹಳ್ಳಿ, ಚಿಟ್ಟಗಯ್ಯನಕೊಪ್ಪಲು, ನೆರೆಗ್ಯಾತನಹಳ್ಳಿ, ಹೊರಳಹಳ್ಳಿ, ಚಿದರವಳ್ಳಿ, ಮುಡುಕನಪುರ, ಹಲವಾರ, ದೊಡ್ಡಬಾಗಿಲು, ಕೊಳತ್ತೂರು ಗ್ರಾಮಗಳಿಗೆ ಈ ಕಾಮಗಾರಿಯಿಂದ ಉಪಯೋಗ ಆಗಲಿದೆ’ ಎಂದು ತಿಳಿಸಿದರು.</p><p>‘ಪಂಚ ಗ್ಯಾರಂಟಿ ಯೋಜನೆಗಳು ಬಡವರ ಜೀವನ ಮಟ್ಟ ಸುಧಾರಿಸಿದೆ. ಬಡ ಮಹಿಳೆ ಹಾಗೂ ಕುಟುಂಬಕ್ಕೆ ತಿಂಗಳಿಗೆ ಒಟ್ಟಾರೆ ₹4ಸಾವಿರದಿಂದ ₹5ಸಾವಿರ ದೊರೆಯುತ್ತಿದೆ’ ಎಂದರು. </p><p>ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮೈಮುಲ್ ಮಾಜಿ ಅಧ್ಯಕ್ಷ ಚಲುವರಾಜು, ಮುಖಂಡರಾದ ಎಚ್.ಸಿ. ಸಿದ್ಧಾರ್ಥ, ಸೋಸಲೆ ಮಹದೇವಸ್ವಾಮಿ, ವರದನಾಯಕ್, ಮಲ್ಲಿಕಾರ್ಜುನ, ಪರಶಿವಮೂರ್ತಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>