ಎಚ್.ಡಿ. ಕುಮಾರಸ್ವಾಮಿ ಅವರು ಜಾತಿ ಮತ ನೋಡದೆ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಪರ ಕೆಲಸ ಮಾಡುವ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲಿಗರು ಕುಮಾರಣ್ಣ
ಜಿ.ಡಿ.ಹರೀಶ್ ಗೌಡ ಶಾಸಕ
ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ರೈತರ ಸಮಸ್ಯೆ ಬಗೆಹರಿಯುತ್ತದೆ. 2028ರಲ್ಲಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು
ಕೆ.ಮಹದೇವ್ ಮಾಜಿ ಶಾಸಕ
ಮುಖಂಡರ ಪರ್ಸ್ ಕಳ್ಳತನ
ಸಮಾರಂಭಕ್ಕೂ ಮೊದಲು ಬಿ.ಎಂ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾಜಿ ಶಾಸಕ ಕೆ. ಮಹದೇವ್ ಸೇರಿದಂತೆ ಕೆಲವರು ಮುಖಂಡರ ಪರ್ಸ್ಗಳನ್ನು ಜೇಬುಗಳ್ಳರು ಕಳ್ಳತನ ಮಾಡಿದರು. ಮಾಜಿ ಶಾಸಕ ಕೆ. ಮಹದೇವ್ ಸಮಾರಂಭದಲ್ಲಿ ವಿವೇಕಾನಂದ ಅವರ ಪರ್ಸ್ ತಂದು ಕೊಟ್ಟವರಿಗೆ ₹50000 ಬಹುಮಾನ ಕೊಡುವುದಾಗಿ ಘೋಷಿಸಿದರೂ ಯಾರು ಪರ್ಸ್ ನೀಡಲು ಮುಂದೆ ಬರಲಿಲ್ಲ