ಕಾಲೇಜಿನ ಪ್ರಾಂಶುಪಾಲ ಆರ್.ಮಂಜುನಾಥ್ ಮಾತನಾಡಿ, ‘ಇಲ್ಲಿ ಶಿಕ್ಷಣದೊಂದಿಗೆ ಶಿಸ್ತಿಗೂ ಮಹತ್ವ ನೀಡಲಾಗುತ್ತದೆ. ಅವರು ಸ್ವೀಕರಿಸುವ ಪ್ರತಿಜ್ಞಾ ವಿಧಿಯ ಆಶಯವನ್ನು ಪಾಲಿಸಿದರೆ ವೃತ್ತಿಪರತೆ ಎತ್ತಿ ಹಿಡಿಯಲು ಸಾಧ್ಯ. ನರ್ಸಿಂಗ್ ಉದ್ಯೋಗದಲ್ಲಿ ನೀವು ಬದುಕು ರೂಪಿಸಿಕೊಳ್ಳುವುದಲ್ಲದೆ ಇತರರ ಜೀವ ಕಾಪಾಡುವ ಕಾರ್ಯವನ್ನೂ ಮಾಡಬಹುದು’ ಎಂದು ಹೇಳಿದರು.