‘ಫಲಾನುಭವಿಗಳು ಬ್ಯಾಂಕ್ಗೆ ಬಂದು ವಿಳಾಸ ನೀಡಿ, ದೃಢೀಕರಣ ಮಾಡಿದರೆ ಅಧಿಕಾರಿಗಳು ಸಾಲ ಕೊಡುತ್ತಾರೆ. ಆದರೆ, ಈ ಸಾಲ ಪಡೆಯಲು ಒಲವು ತೋರುತ್ತಿಲ್ಲ. ನಾವೇ ಹುಡುಕಿಕೊಂಡು ಹೋಗಬೇಕಿದೆ. ಪಾಲಿಕೆ ಅಧಿಕಾರಿಗಳು ಗುರುತಿನ ಚೀಟಿ ನೀಡಿ ಸುಮ್ಮನಾಗುತ್ತಾರೆ. ಯೋಜನೆ ಬಗ್ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಸಹಕಾರ ಸಂಘಗಳು ಜಂಟಿ ನಿಬಂಧಕ (ಮೈಸೂರು ವಿಭಾಗ) ಪ್ರಕಾಶ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.