ಮುಖ್ಯಅತಿಥಿಯಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ‘ಒಕ್ಕಲಿಗರು ಸ್ವಾಭಿಮಾನ ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸಬೇಕಿಲ್ಲ. ಒಗ್ಗಟ್ಟಿನಿಂದ, ಪರಸ್ಪರ ಸಹಕಾರದಿಂದ, ಪರಂಪರೆಯ ಬಗ್ಗೆ ಹೆಮ್ಮೆಹೊಂದಿ ಬದುಕಬೇಕು. ಚುನಾವಣೇ ಸಮಯದಲ್ಲಷ್ಟೇ ಮೈಕೊಡವಿ ಏಳುವುದಲ್ಲ. ಎಲ್ಲ ಸಂಧರ್ಭದಲ್ಲೂ ಒಗ್ಗಟ್ಟಿನಿಂದಿದ್ದು, ಸಮುದಾಯದ ಏಳಿಗೆ ಬಯಸಬೇಕು’ ಎಂದರು.