ಹಳಗನ್ನಡ ಓದುವುದು ಈಗಿನ ಬಹುತೇಕ ಕನ್ನಡ ಅಧ್ಯಾಪಕರಿಗೆ ಬರುತ್ತಲೇ ಇಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತಿದೆ. ಅಧ್ಯಾಪಕರೇ ಕಲಿಸುವಲ್ಲಿ ಆಸಕ್ತಿ ತೋರಿಸದೇ ಇರುವ ಕಾರಣ ವಿದ್ಯಾರ್ಥಿಗಳಲ್ಲೂ ಆಸಕ್ತಿ ಬರುತ್ತಿಲ್ಲ. ಈ ಕೊರತೆಯನ್ನು ನೀಗಿಸಬೇಕಾದರೆ ಹಳಗನ್ನಡ ಕಾರ್ಯಾಗಾರಗಳು ಹೆಚ್ಚಾಗಿ ನಡೆಯಬೇಕು. ಹಳಗನ್ನಡ ವಿದ್ವಾಂಸರು ಹೊಸ ತಲೆಮಾರಿನ ಶಿಕ್ಷಕರಿಗೆ ಹಳಗನ್ನಡ ಓದುವುದು, ಭಾಷಾ ಬಳಕೆ, ಅರ್ಥ ವ್ಯಾಖ್ಯಾನಗಳನ್ನು ಮನದಟ್ಟಾಗುವಂತೆ ತಿಳಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.