‘ತಾಲ್ಲೂಕಿನ ಹಾರೋಹಳ್ಳಿಯ ರಾಮದಾಸ್ ಅವರ ಜಮೀನಿನಲ್ಲಿದ್ದ ಕಲ್ಲನ್ನು ಹೊರ ತೆಗೆದಿದ್ದೆವು. ಮಾಲೀಕರು ಸಮತಟ್ಟು ಮಾಡಿಕೊಡುವಂತೆ ಕೇಳಿದ್ದರು. ಆಗ, ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಭೂ ಸಂಪತ್ತನ್ನು ಅನುಮತಿ ಇಲ್ಲದೆ ಹೊರತೆಗೆದಿದ್ದೀರಿ ಎಂದು ದಂಡ ವಿಧಿಸಿದ್ದರು. ಇದೆಲ್ಲವೂ, ಬಾಲರಾಮನ ಮೂರ್ತಿಗೆ ಬೇಕಾದ ಶಿಲೆ ಕಳುಹಿಸುವುದಕ್ಕಿಂತ ಮುಂಚೆ ನಡೆದಿತ್ತು’ ಎಂದು ಶ್ರೀನಿವಾಸ್ ತಿಳಿಸಿದರು.