<p><strong>ಪಿರಿಯಾಪಟ್ಟಣ</strong>: ‘ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಲು ಸತತ ಅಧ್ಯಯನ ಮತ್ತು ತಾಳ್ಮೆ ಮುಖ್ಯ’ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.</p>.<p>ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ವಕೀಲರ ಸಂಘ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸ್ವಇಚ್ಚೆಯಿಂದ ಈ ವೃತ್ತಿಗೆ ಬರುವವರಿಗಿಂತ ಬೇರೆ ಕಡೆ ಅವಕಾಶ ಸಿಗಲಿಲ್ಲ ಎಂಬ ಕಾರಣದಿಂದ ಬರುವವರೆ ಹೆಚ್ಚು. ವೃತ್ತಿ ಸ್ವೀಕರಿಸಿದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ವಕೀಲಿಕೆ ನಡೆಸಿದರೆ ಉತ್ತಮ ಜೀವನ, ಉನ್ನತ ಹುದ್ದೆ ದೊರೆಯಲಿದೆ’ ಎಂದರು.</p>.<p>‘ಗ್ರಾಮೀಣ ಪ್ರದೇಶದ ವಕೀಲರು ವೃತ್ತಿಯ ಜೊತೆಗೆ ಕೃಷಿಯ ಮೇಲಿನ ಅವಲಂಬನೆ ಸಹ ಇರುವುದರಿಂದ ಸತತ ಅಧ್ಯಯನದಿಂದ ವಿಮುಖರಾಗಬಾರದು. ಕಾನೂನು ಕ್ಷೇತ್ರ ಸಮುದ್ರವಿದ್ದಂತೆ ಇಲ್ಲಿ ಆಳಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಕಲಿಯುವ ಅವಕಾಶವಿದೆ’ ಎಂದರು.</p>.<p>ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ‘ಉತ್ತಮ ಸಮವಸ್ತ್ರ ಧರಿಸುವುದು, ಉನ್ನತ ನಡೆ ನುಡಿಯೂ ಯಶಸ್ಸಿಗೆ ಸಹಕಾರಿ’ ಎಂದರು.</p>.<p>ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ವೇತಾ ಮಾತನಾಡಿ, ‘ಕಿರಿಯ ವಕೀಲರು ನ್ಯಾಯಾಲಯದಲ್ಲಿ ಕಲಾಪವನ್ನು ಗಂಭೀರವಾಗಿ ವೀಕ್ಷಿಸಿ, ಸಂಶಯವಿದ್ದಲ್ಲಿ ಹಿರಿಯ ನ್ಯಾಯಾಧೀಶರ ಸಲಹೆ ಪಡೆಯುವ ಮೂಲಕ ಉತ್ತಮ ವಕೀಲರಾಗಿ ರೂಪುಗೊಳ್ಳಿ’ ಎಂದು ಸಲಹೆ ನೀಡಿದರು.</p>.<p>ವಕೀಲ ಕೆ.ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಗೋವಿಂದಗೌಡ, ಕೆ.ಎ.ಮಹದೇವಪ್ಪ, ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿದರು.</p>.<p>ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಸಹಕಾರದರ್ಶಿ ಗುರುಪ್ರಸಾದ್, ಎಪಿಪಿಗಳಾದ ಶಿವಶಂಕರ್ ಗಾವಂಕರ್, ಉಮಾಲಕ್ಷ್ಮಿ, ಜಾನಕಿ ಹಾಜರಿದ್ದರು.</p>.<p>Highlights - ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾ ಕಿರಿಯ ವಕೀಲರು ಕಲಾಪ ವೀಕ್ಷಿಸಲು ಸಲಹೆ ಕಾನೂನು ಕ್ಷೇತ್ರ; ಕಲಿಯುವ ಅವಕಾಶ ಅಪಾರ</p>.<p>Quote - ಎಂ.ಆರ್.ಯೋಗೀಶ್ ಪ್ರಧಾನ ಸಿವಿಲ್ ನ್ಯಾಯಾಧೀಶ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿರಿಯಾಪಟ್ಟಣ</strong>: ‘ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಲು ಸತತ ಅಧ್ಯಯನ ಮತ್ತು ತಾಳ್ಮೆ ಮುಖ್ಯ’ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.</p>.<p>ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ವಕೀಲರ ಸಂಘ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಸ್ವಇಚ್ಚೆಯಿಂದ ಈ ವೃತ್ತಿಗೆ ಬರುವವರಿಗಿಂತ ಬೇರೆ ಕಡೆ ಅವಕಾಶ ಸಿಗಲಿಲ್ಲ ಎಂಬ ಕಾರಣದಿಂದ ಬರುವವರೆ ಹೆಚ್ಚು. ವೃತ್ತಿ ಸ್ವೀಕರಿಸಿದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ವಕೀಲಿಕೆ ನಡೆಸಿದರೆ ಉತ್ತಮ ಜೀವನ, ಉನ್ನತ ಹುದ್ದೆ ದೊರೆಯಲಿದೆ’ ಎಂದರು.</p>.<p>‘ಗ್ರಾಮೀಣ ಪ್ರದೇಶದ ವಕೀಲರು ವೃತ್ತಿಯ ಜೊತೆಗೆ ಕೃಷಿಯ ಮೇಲಿನ ಅವಲಂಬನೆ ಸಹ ಇರುವುದರಿಂದ ಸತತ ಅಧ್ಯಯನದಿಂದ ವಿಮುಖರಾಗಬಾರದು. ಕಾನೂನು ಕ್ಷೇತ್ರ ಸಮುದ್ರವಿದ್ದಂತೆ ಇಲ್ಲಿ ಆಳಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಕಲಿಯುವ ಅವಕಾಶವಿದೆ’ ಎಂದರು.</p>.<p>ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ‘ಉತ್ತಮ ಸಮವಸ್ತ್ರ ಧರಿಸುವುದು, ಉನ್ನತ ನಡೆ ನುಡಿಯೂ ಯಶಸ್ಸಿಗೆ ಸಹಕಾರಿ’ ಎಂದರು.</p>.<p>ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ವೇತಾ ಮಾತನಾಡಿ, ‘ಕಿರಿಯ ವಕೀಲರು ನ್ಯಾಯಾಲಯದಲ್ಲಿ ಕಲಾಪವನ್ನು ಗಂಭೀರವಾಗಿ ವೀಕ್ಷಿಸಿ, ಸಂಶಯವಿದ್ದಲ್ಲಿ ಹಿರಿಯ ನ್ಯಾಯಾಧೀಶರ ಸಲಹೆ ಪಡೆಯುವ ಮೂಲಕ ಉತ್ತಮ ವಕೀಲರಾಗಿ ರೂಪುಗೊಳ್ಳಿ’ ಎಂದು ಸಲಹೆ ನೀಡಿದರು.</p>.<p>ವಕೀಲ ಕೆ.ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಗೋವಿಂದಗೌಡ, ಕೆ.ಎ.ಮಹದೇವಪ್ಪ, ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿದರು.</p>.<p>ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಸಹಕಾರದರ್ಶಿ ಗುರುಪ್ರಸಾದ್, ಎಪಿಪಿಗಳಾದ ಶಿವಶಂಕರ್ ಗಾವಂಕರ್, ಉಮಾಲಕ್ಷ್ಮಿ, ಜಾನಕಿ ಹಾಜರಿದ್ದರು.</p>.<p>Highlights - ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾ ಕಿರಿಯ ವಕೀಲರು ಕಲಾಪ ವೀಕ್ಷಿಸಲು ಸಲಹೆ ಕಾನೂನು ಕ್ಷೇತ್ರ; ಕಲಿಯುವ ಅವಕಾಶ ಅಪಾರ</p>.<p>Quote - ಎಂ.ಆರ್.ಯೋಗೀಶ್ ಪ್ರಧಾನ ಸಿವಿಲ್ ನ್ಯಾಯಾಧೀಶ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>