<p><strong>ನಂಜನಗೂಡು</strong>: ತರಗನಹಳ್ಳಿ ಗ್ರಾಮದಲ್ಲಿ ಶಿವಣ್ಣ ಅವರ ಜಮೀನಿನಲ್ಲಿ ಬೆಳೆದ ಶುಂಠಿ ಬೆಳೆಗೆ ಆರ್ಗನಿಕ್ ಪ್ರಾಡಕ್ಟ್ ಎಂಬ ಕಂಪನಿ ನೀಡಿದ ಔಷಧಿ ಸಿಂಪರಣೆ ಮಾಡಿದ್ದರಿಂದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ.</p>.<p>ಶಿವಣ್ಣನ ಶುಂಠಿ ಬೆಳೆಯ ಜಮೀನಿಗೆ ಭೇಟಿ ನೀಡಿದ ಆರ್ಗನಿಕ್ ಪ್ರಾಡಕ್ಟ್ ಕಂಪನಿ ಪ್ರತಿನಿಧಿ ನಮ್ಮ ಕಂಪನಿ ಔಷಧ ಶುಂಠಿ ಬೆಳೆಗೆ ಉಪಯೋಗಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂದು ನಂಬಿಸಿ, ಬೆಳೆಗೆ ಔಷಧಿ ಸಿಂಪಡಿಸಿದ್ದರು.</p>.<p>ಔಷಧಿ ಸಿಂಪಡಿಸಿದ 15ದಿನಗಳ ನಂತರ ಶುಂಠಿ ಬೆಳೆ ಒಣಗಿ ಸಂಪೂರ್ಣ ನಾಶವಾಗಿದೆ, ಇದರಿಂದ ₹7 ಲಕ್ಷ ನಷ್ಟ ಉಂಟಾಗಿದೆ ಎಂದು ಶಿವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.</p>.<p>ಶಿವಣ್ಣ ಅದೇ ಗ್ರಾಮದ ಚಿನ್ನಸ್ವಾಮಿ ಆಚಾರ್ ಅವರ ಜಮೀನನ್ನು ಶುಂಠಿ ಬೆಳೆಯಲು ₹1.30 ಲಕ್ಷಕ್ಕೆ ಗುತ್ತಿಗೆಗೆ ಪಡೆದಿದ್ದರು. ನಷ್ಟವನ್ನು ಕಂಪನಿಯವರು ತುಂಬಿಕೊಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಕಂಪನಿ ಮುಂದೆ ಕುಟುಂಬ ಸಮೇತರಾಗಿ ಧರಣಿ ಕೂರುತ್ತೇವೆ ಎಂದು ಶಿವಣ್ಣ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು</strong>: ತರಗನಹಳ್ಳಿ ಗ್ರಾಮದಲ್ಲಿ ಶಿವಣ್ಣ ಅವರ ಜಮೀನಿನಲ್ಲಿ ಬೆಳೆದ ಶುಂಠಿ ಬೆಳೆಗೆ ಆರ್ಗನಿಕ್ ಪ್ರಾಡಕ್ಟ್ ಎಂಬ ಕಂಪನಿ ನೀಡಿದ ಔಷಧಿ ಸಿಂಪರಣೆ ಮಾಡಿದ್ದರಿಂದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ.</p>.<p>ಶಿವಣ್ಣನ ಶುಂಠಿ ಬೆಳೆಯ ಜಮೀನಿಗೆ ಭೇಟಿ ನೀಡಿದ ಆರ್ಗನಿಕ್ ಪ್ರಾಡಕ್ಟ್ ಕಂಪನಿ ಪ್ರತಿನಿಧಿ ನಮ್ಮ ಕಂಪನಿ ಔಷಧ ಶುಂಠಿ ಬೆಳೆಗೆ ಉಪಯೋಗಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂದು ನಂಬಿಸಿ, ಬೆಳೆಗೆ ಔಷಧಿ ಸಿಂಪಡಿಸಿದ್ದರು.</p>.<p>ಔಷಧಿ ಸಿಂಪಡಿಸಿದ 15ದಿನಗಳ ನಂತರ ಶುಂಠಿ ಬೆಳೆ ಒಣಗಿ ಸಂಪೂರ್ಣ ನಾಶವಾಗಿದೆ, ಇದರಿಂದ ₹7 ಲಕ್ಷ ನಷ್ಟ ಉಂಟಾಗಿದೆ ಎಂದು ಶಿವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.</p>.<p>ಶಿವಣ್ಣ ಅದೇ ಗ್ರಾಮದ ಚಿನ್ನಸ್ವಾಮಿ ಆಚಾರ್ ಅವರ ಜಮೀನನ್ನು ಶುಂಠಿ ಬೆಳೆಯಲು ₹1.30 ಲಕ್ಷಕ್ಕೆ ಗುತ್ತಿಗೆಗೆ ಪಡೆದಿದ್ದರು. ನಷ್ಟವನ್ನು ಕಂಪನಿಯವರು ತುಂಬಿಕೊಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಕಂಪನಿ ಮುಂದೆ ಕುಟುಂಬ ಸಮೇತರಾಗಿ ಧರಣಿ ಕೂರುತ್ತೇವೆ ಎಂದು ಶಿವಣ್ಣ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>