ಆನೆಗಳನ್ನು ಅರಣ್ಯ ಇಲಾಖೆಯವರು ಸಕಾಲಕ್ಕೆ ಸಜ್ಜುಗೊಳಿಸಿದ್ದರು. ಆದರೆ, ಅಭಿಮನ್ಯುಗೆ ಎಷ್ಟೊತ್ತಿಗೆ ಅಂಬಾರಿ ಕಟ್ಟಬೇಕು ಎನ್ನುವ ನಿಖರ ಮಾಹಿತಿಯನ್ನು ಜಿಲ್ಲಾಡಳಿತದವರು ಕೊಟ್ಟಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, 45 ನಿಮಿಷಗಳವರೆಗೆ ಆನೆಗಳನ್ನು ನಿಲ್ಲಿಸಿಕೊಂಡಿರಲಾಗಿತ್ತು. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಥಳಕ್ಕೆ ಹೋಗಿ ಸೂಚಿಸಿದ ಬಳಿಕ ಅಂಬಾರಿ ಕಟ್ಟುವ ಕಾರ್ಯವನ್ನು ತರಾತುರಿಯಲ್ಲಿ ಮಾಡಲಾಯಿತು. ಆದರೆ,ಆ ವೇಳೆಗೆ ಲಗ್ನ ಮೀರಿತ್ತು. ಇದರಿಂದಾಗಿ ಮೆರವಣಿಗೆ ಸಮಿತಿಯವರು ಕೆಲವು ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ನಿಧಾನ ಮಾಡಿದರು. ಕೆಲವೊಮ್ಮೆ ರಾಜಮಾರ್ಗ ‘ಖಾಲಿ’ ಎನಿಸುತ್ತಿತ್ತು!