ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ರೂಪರೇಷೆ ಸಿದ್ಧಪಡಿಸುತ್ತಾರೆ. ಅವರ ಕರೆಗಾಗಿ ಕಾಯುತ್ತಿದ್ದೇವೆ. ಕಲಾವಿದರಾದ ನಾವು ಇರುವುದು ಕೇವಲ ಚಲನಚಿತ್ರ ಮಾಡಲು ಹಾಗೂ ಪ್ರದರ್ಶಿಸುವುದಕ್ಕಷ್ಟೇ ಅಲ್ಲ. ನಾಡಿನ ನೆಲ, ಜಲ, ಭಾಷೆಗೆ ಕಷ್ಟ ಬಂದಾಗ ಹೋರಾಟಕ್ಕೆ ಬರಲೇಬೇಕು’ ಎಂದು ತಿಳಿಸಿದರು.