<p><strong>ಮೈಸೂರು</strong>: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟರಾದರೆ ಪ್ರಶ್ನಿಸಿ ಹೋರಾಡಬಹುದು. ಆದರೆ, ಹೋರಾಟಗಾರರೇ ಭ್ರಷ್ಟರಾದರೆ ಅದು ಸಮಾಜಕ್ಕೆ ಅಪಾಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.</p>.<p>ಕರ್ನಾಟಕ ರಾಜ್ಯ ರೈತಸಂಘ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ ವತಿಯಿಂದ ಬುಧವಾರ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ರೈತ ಹೋರಾಟಗಾರರಾದ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂತಹ ಸಂದರ್ಭದಲ್ಲಿ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರು ‘ಚಳವಳಿಯ ಆಸ್ತಿ’ಯಾಗಿದ್ದರು. ಅವರು ಅನೇಕ ಹೋರಾಟಗಳಲ್ಲಿ ಜೀವದ ಹಂಗು ತೊರೆದು ಭಾಗಿಯಾಗಿದ್ದರು ಎಂದು ಶ್ಲಾಘಿಸಿದರು.</p>.<p>ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಐಎಎಸ್ ಉತ್ತೀರ್ಣರಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಮಸ್ವಾಮಿ, 10 ವರ್ಷ ಅಧಿಕಾರ ಇದ್ದರೂ ರಾಜೀನಾಮೆ ನೀಡಿ, ರೈತ ಹೋರಾಟಗಳಲ್ಲಿ ಪಾಲ್ಗೊಂಡರು ಎಂದು ಹೇಳಿದರು.</p>.<p>‘ಎಂ.ರಾಮು ಅವರು ಮುಖ್ಯವಾಗಿ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಕೊಲೆ ಬೆದರಿಕೆ ಬರುತ್ತಿದ್ದರೂ, ಇವರು ಪ್ರಾಣದ ಹಂಗು ತೊರೆದು ಹೋರಾಡಿದರು’ ಎಂದು ತಿಳಿಸಿದರು.</p>.<p>ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳು ವ್ಯವಸಾಯ ಕ್ಷೇತ್ರವನ್ನು ಕಬಳಿಸಿ, ಖಾಸಗಿ ವಲಯಗಳಿಗೆ ಆದ್ಯತೆ ನೀಡುತ್ತಿವೆ ಎಂದರು.</p>.<p>ಹೋರಾಟಗಾರರಾದ ಪ.ಮಲ್ಲೇಶ್, ಆಲಗೋಡು ಶಿವಕುಮಾರ್, ಪುರುಷೋತ್ತಮ್, ಹೊಸಕೋಟೆ ಬಸವರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟರಾದರೆ ಪ್ರಶ್ನಿಸಿ ಹೋರಾಡಬಹುದು. ಆದರೆ, ಹೋರಾಟಗಾರರೇ ಭ್ರಷ್ಟರಾದರೆ ಅದು ಸಮಾಜಕ್ಕೆ ಅಪಾಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.</p>.<p>ಕರ್ನಾಟಕ ರಾಜ್ಯ ರೈತಸಂಘ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ ವತಿಯಿಂದ ಬುಧವಾರ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ರೈತ ಹೋರಾಟಗಾರರಾದ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂತಹ ಸಂದರ್ಭದಲ್ಲಿ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರು ‘ಚಳವಳಿಯ ಆಸ್ತಿ’ಯಾಗಿದ್ದರು. ಅವರು ಅನೇಕ ಹೋರಾಟಗಳಲ್ಲಿ ಜೀವದ ಹಂಗು ತೊರೆದು ಭಾಗಿಯಾಗಿದ್ದರು ಎಂದು ಶ್ಲಾಘಿಸಿದರು.</p>.<p>ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಐಎಎಸ್ ಉತ್ತೀರ್ಣರಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಮಸ್ವಾಮಿ, 10 ವರ್ಷ ಅಧಿಕಾರ ಇದ್ದರೂ ರಾಜೀನಾಮೆ ನೀಡಿ, ರೈತ ಹೋರಾಟಗಳಲ್ಲಿ ಪಾಲ್ಗೊಂಡರು ಎಂದು ಹೇಳಿದರು.</p>.<p>‘ಎಂ.ರಾಮು ಅವರು ಮುಖ್ಯವಾಗಿ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಕೊಲೆ ಬೆದರಿಕೆ ಬರುತ್ತಿದ್ದರೂ, ಇವರು ಪ್ರಾಣದ ಹಂಗು ತೊರೆದು ಹೋರಾಡಿದರು’ ಎಂದು ತಿಳಿಸಿದರು.</p>.<p>ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳು ವ್ಯವಸಾಯ ಕ್ಷೇತ್ರವನ್ನು ಕಬಳಿಸಿ, ಖಾಸಗಿ ವಲಯಗಳಿಗೆ ಆದ್ಯತೆ ನೀಡುತ್ತಿವೆ ಎಂದರು.</p>.<p>ಹೋರಾಟಗಾರರಾದ ಪ.ಮಲ್ಲೇಶ್, ಆಲಗೋಡು ಶಿವಕುಮಾರ್, ಪುರುಷೋತ್ತಮ್, ಹೊಸಕೋಟೆ ಬಸವರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>