<p><strong>ಮೈಸೂರು:</strong> ಹೊಯ್ಸಳರ ಕಾಲದ ಬಹುಭಾಷಾ ಶಾಸನವನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ. </p>.<p>ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿಯಲ್ಲಿನ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಕ್ಕಿರುವ ಶಾಸನ ಕ್ರಿ.ಶ.12ನೇ ಶತಮಾನಕ್ಕೆ ಸೇರಿದ್ದು, ಹೊಯ್ಸಳ ದೊರೆ ಒಂದನೇ ನರಸಿಂಹನ ಕಾಲದಲ್ಲಿ ಕೆತ್ತಲಾಗಿದೆ. </p>.<p>‘2 ಅಡಿ ಅಗಲ, 2.5 ಅಡಿ ಉದ್ದವಿರುವ ಶಾಸನವು ಬಿಳಿಕಣಶಿಲೆಯದಾಗಿದ್ದು, ಕನ್ನಡ, ತಮಿಳು, ಸಂಸ್ಕೃತ ಭಾಷೆಯಲ್ಲಿ 9 ಸಾಲುಗಳನ್ನು ಬರೆಯಲಾಗಿದೆ. ಕನ್ನಡ– ತಮಿಳು ಭಾಷಾ ಬಾಂಧವ್ಯದ ಕುರುಹಾಗಿದೆ. ನಿವೃತ್ತ ಶಿಕ್ಷಕ ಮಹಾದೇವೇಗೌಡ ಅವರು ನೀಡಿದ ಮಾಹಿತಿ ಮೇರೆಗೆ ಸಂಶೋಧನೆ ನಡೆಸಲಾಯಿತು’ ಎಂದು ಸಂಶೋಧಕ ಸಿ.ಎ.ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು. </p>.<h2>ಶಾಸನದಲ್ಲೇನಿದೆ:</h2>.<p>ನರಸಿಂಹನ ದಂಡನಾಯಕ ಕಾರಿಕುಡಿ ತಿಲ್ಲೈಕೂತಾಂಡಿ, ಶ್ರೀಯಾದವ ನಾರಾಯಣ ಚತುರ್ವೇದಿ ಮಂಗಲ ಎಂದು ಕರೆಯಲಾಗುತ್ತಿದ್ದ ಕೆರೆ ತೊಣ್ಣೂರಿನ ಕೃಷ್ಣ ದೇಗುಲದಲ್ಲಿ ನಡೆಯುವ ಉತ್ಸವ, ಆಚರಣೆಗಳಿಗೆ ಬೆಟ್ಟಹಳ್ಳಿ ಸೀಮೆಯನ್ನು ಕೊಡುಗೆಯಾಗಿ ನೀಡಲಾಗಿದೆಯೆಂದು ಹೇಳುತ್ತದೆ. </p>.<p>‘ತಮಿಳರೊಂದಿಗೆ ಕನ್ನಡಿಗರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದನ್ನು ಶಾಸನ ಸೂಚಿಸುತ್ತದೆ. ಹೊಯ್ಸಳರಿಗೆ ದಂಡನಾಯಕರು ತಮಿಳರೇ ಆಗಿದ್ದರು’ ಎಂದು ಶಶಿಧರ ಹೇಳಿದರು. </p>.<p>‘ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರ್ ಮಾರ್ಗದರ್ಶನದಲ್ಲಿ ಬಿ.ಪವಿತ್ರಾ, ಛಾಯಾಗ್ರಾಹಕರಾದ ರಮೇಶ್ ಪಟೇಲ್, ಶಶಿಕುಮಾರ್ ತಂಡವು ಶಾಸನದ ಪಡಿಯಚ್ಚನ್ನು ತೆಗೆದುಕೊಂಡಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಹೊಯ್ಸಳರ ಕಾಲದ ಬಹುಭಾಷಾ ಶಾಸನವನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ಸಿ.ಎ.ಶಶಿಧರ ಮತ್ತು ತಂಡ ಪತ್ತೆ ಹಚ್ಚಿದೆ. </p>.<p>ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆ.ಬೆಟ್ಟಹಳ್ಳಿಯಲ್ಲಿನ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಕ್ಕಿರುವ ಶಾಸನ ಕ್ರಿ.ಶ.12ನೇ ಶತಮಾನಕ್ಕೆ ಸೇರಿದ್ದು, ಹೊಯ್ಸಳ ದೊರೆ ಒಂದನೇ ನರಸಿಂಹನ ಕಾಲದಲ್ಲಿ ಕೆತ್ತಲಾಗಿದೆ. </p>.<p>‘2 ಅಡಿ ಅಗಲ, 2.5 ಅಡಿ ಉದ್ದವಿರುವ ಶಾಸನವು ಬಿಳಿಕಣಶಿಲೆಯದಾಗಿದ್ದು, ಕನ್ನಡ, ತಮಿಳು, ಸಂಸ್ಕೃತ ಭಾಷೆಯಲ್ಲಿ 9 ಸಾಲುಗಳನ್ನು ಬರೆಯಲಾಗಿದೆ. ಕನ್ನಡ– ತಮಿಳು ಭಾಷಾ ಬಾಂಧವ್ಯದ ಕುರುಹಾಗಿದೆ. ನಿವೃತ್ತ ಶಿಕ್ಷಕ ಮಹಾದೇವೇಗೌಡ ಅವರು ನೀಡಿದ ಮಾಹಿತಿ ಮೇರೆಗೆ ಸಂಶೋಧನೆ ನಡೆಸಲಾಯಿತು’ ಎಂದು ಸಂಶೋಧಕ ಸಿ.ಎ.ಶಶಿಧರ ‘ಪ್ರಜಾವಾಣಿ’ಗೆ ತಿಳಿಸಿದರು. </p>.<h2>ಶಾಸನದಲ್ಲೇನಿದೆ:</h2>.<p>ನರಸಿಂಹನ ದಂಡನಾಯಕ ಕಾರಿಕುಡಿ ತಿಲ್ಲೈಕೂತಾಂಡಿ, ಶ್ರೀಯಾದವ ನಾರಾಯಣ ಚತುರ್ವೇದಿ ಮಂಗಲ ಎಂದು ಕರೆಯಲಾಗುತ್ತಿದ್ದ ಕೆರೆ ತೊಣ್ಣೂರಿನ ಕೃಷ್ಣ ದೇಗುಲದಲ್ಲಿ ನಡೆಯುವ ಉತ್ಸವ, ಆಚರಣೆಗಳಿಗೆ ಬೆಟ್ಟಹಳ್ಳಿ ಸೀಮೆಯನ್ನು ಕೊಡುಗೆಯಾಗಿ ನೀಡಲಾಗಿದೆಯೆಂದು ಹೇಳುತ್ತದೆ. </p>.<p>‘ತಮಿಳರೊಂದಿಗೆ ಕನ್ನಡಿಗರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದನ್ನು ಶಾಸನ ಸೂಚಿಸುತ್ತದೆ. ಹೊಯ್ಸಳರಿಗೆ ದಂಡನಾಯಕರು ತಮಿಳರೇ ಆಗಿದ್ದರು’ ಎಂದು ಶಶಿಧರ ಹೇಳಿದರು. </p>.<p>‘ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರ್ ಮಾರ್ಗದರ್ಶನದಲ್ಲಿ ಬಿ.ಪವಿತ್ರಾ, ಛಾಯಾಗ್ರಾಹಕರಾದ ರಮೇಶ್ ಪಟೇಲ್, ಶಶಿಕುಮಾರ್ ತಂಡವು ಶಾಸನದ ಪಡಿಯಚ್ಚನ್ನು ತೆಗೆದುಕೊಂಡಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>