ಸಿಂಡಿಕೇಟ್ ಸದಸ್ಯ ಬಂಧನ
ಬಳ್ಳಾರಿ: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಮಾರಾಟ ಆರೋಪದಡಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ಗೌಡ ಸೇರಿ ಮೂವರನ್ನು ಕೌಲ್ಬಜಾರ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಂಜುನಾಥ ಮೆಡಿಕಲ್ ಏಜೆನ್ಸಿ ಮಾಲೀಕ ವೆಂಕಟೇಶ ಬಾಬು, ವರ್ತಕ ಪೋಲಾ ಪ್ರವೀಣ್ ಬಂಧಿತ ಇನ್ನಿಬ್ಬರು.