<p><strong>ಮೈಸೂರು:</strong> ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಚೀನಾ ಮಹಾಕ್ರಾಂತಿಯ ಶಿಲ್ಪಿ ಮತ್ತು ಕಾರ್ಮಿಕ ವರ್ಗದ ನಾಯಕ ಮಾವೋ ಝೆಡಾಂಗ್ ಅವರ 48ನೇ ಸ್ಮರಣ ವಾರ್ಷಿಕ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆಸಲಾಯಿತು.</p>.<p>ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯ ಚಂದ್ರಶೇಖರ್ ಮೇಟಿ ಮಾತನಾಡಿ, ‘ಮಾರ್ಕ್ಸ್ ವಾದ ಒಂದು ವಿಜ್ಞಾನಗಳ ವಿಜ್ಞಾನ ಎಂದು ಅರಿತಿದ್ದ ಮಾವೋ ಚೀನಾದಲ್ಲಿ ಮಾರ್ಕ್ಸ್ ವಾದವನ್ನು ಚೀನಾದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿದರು. ಆ ಪರಿಣಾಮವಾಗಿ ಚೀನಾದಲ್ಲಿ ಜನಪ್ರಜಾತಾಂತ್ರಿಕ ಕ್ರಾಂತಿ ಯಶಸ್ವಿಯಾಗಿ ಜರುಗಿತ್ತು’ ಎಂದು ಸ್ಮರಿಸಿದರು.</p>.<p>‘ಸಮಾಜದ ಬದಲಾವಣೆಯಲ್ಲಿ ತೊಡಗುವವರು ಮೊದಲು ಜನರ ಮೇಲೆ ನಂಬಿಕೆ ಇಡಬೇಕು ಎಂಬುದನ್ನು ಕಲಿಸಿಕೊಟ್ಟರು. ಅವರ ವಿಚಾರಗಳನ್ನು ಮಾರ್ಕ್ಸ್ ವಾದಿಗಳು ಮೈಗೂಡಿಸಿಕೊಂಡು ಸಮಾಜವಾದಿ ಕ್ರಾಂತಿಗೆ ಶ್ರಮಿಸಬೇಕು’ ಎಂದರು.</p>.<p>ಜಿಲ್ಲಾ ಸಮಿತಿಯ ಸದಸ್ಯ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾ, ಯಶೋಧರ್, ಸುಮಾ, ಬಸವರಾಜ್, ಸುಭಾಷ್, ಚಂದ್ರಕಲಾ, ಪುಷ್ಪಾ, ಆಸಿಯಾ ಬೇಗಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಚೀನಾ ಮಹಾಕ್ರಾಂತಿಯ ಶಿಲ್ಪಿ ಮತ್ತು ಕಾರ್ಮಿಕ ವರ್ಗದ ನಾಯಕ ಮಾವೋ ಝೆಡಾಂಗ್ ಅವರ 48ನೇ ಸ್ಮರಣ ವಾರ್ಷಿಕ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆಸಲಾಯಿತು.</p>.<p>ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯ ಚಂದ್ರಶೇಖರ್ ಮೇಟಿ ಮಾತನಾಡಿ, ‘ಮಾರ್ಕ್ಸ್ ವಾದ ಒಂದು ವಿಜ್ಞಾನಗಳ ವಿಜ್ಞಾನ ಎಂದು ಅರಿತಿದ್ದ ಮಾವೋ ಚೀನಾದಲ್ಲಿ ಮಾರ್ಕ್ಸ್ ವಾದವನ್ನು ಚೀನಾದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿದರು. ಆ ಪರಿಣಾಮವಾಗಿ ಚೀನಾದಲ್ಲಿ ಜನಪ್ರಜಾತಾಂತ್ರಿಕ ಕ್ರಾಂತಿ ಯಶಸ್ವಿಯಾಗಿ ಜರುಗಿತ್ತು’ ಎಂದು ಸ್ಮರಿಸಿದರು.</p>.<p>‘ಸಮಾಜದ ಬದಲಾವಣೆಯಲ್ಲಿ ತೊಡಗುವವರು ಮೊದಲು ಜನರ ಮೇಲೆ ನಂಬಿಕೆ ಇಡಬೇಕು ಎಂಬುದನ್ನು ಕಲಿಸಿಕೊಟ್ಟರು. ಅವರ ವಿಚಾರಗಳನ್ನು ಮಾರ್ಕ್ಸ್ ವಾದಿಗಳು ಮೈಗೂಡಿಸಿಕೊಂಡು ಸಮಾಜವಾದಿ ಕ್ರಾಂತಿಗೆ ಶ್ರಮಿಸಬೇಕು’ ಎಂದರು.</p>.<p>ಜಿಲ್ಲಾ ಸಮಿತಿಯ ಸದಸ್ಯ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾ, ಯಶೋಧರ್, ಸುಮಾ, ಬಸವರಾಜ್, ಸುಭಾಷ್, ಚಂದ್ರಕಲಾ, ಪುಷ್ಪಾ, ಆಸಿಯಾ ಬೇಗಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>