ಕೈಲಾಸ ಪರ್ವತದೊಳಗೆ ಗುಹೆಯನ್ನು ಮಾಡಲಾಗಿದ್ದು, ಜ್ಯೋತಿರ್ಲಿಂಗಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಹೆಯ ಗೋಡೆಗಳ ಮೇಲೆ ಬ್ರಹ್ಮಕುಮಾರಿ ಸಂಸ್ಥೆಯ ಆದರ್ಶ, ಉದ್ದೇಶಗಳನ್ನು ಸಾರುವ ಭಿತ್ತಿಚಿತ್ರಗಳಿವೆ. ರಾಜಯೋಗವನ್ನು ವಿವರಿಸುವ, ದೇಹ ಹಾಗೂ ಮನಸ್ಸನ್ನು ನಿಯಂತ್ರಿಸಲು ಅನುಸರಿಸಬೇಕಾದ ಮಾಹಿತಿ ಫಲಕಗಳು ನೋಡುಗರನ್ನು ಕ್ಷಣ ಹೊತ್ತು ನಿಲ್ಲಿಸುತ್ತವೆ. ಸಂಸ್ಥಾಪಕ ಪ್ರಜಾಪಿತ ಬ್ರಹ್ಮ ಬಾಬಾ ಅವರ ಧ್ಯಾನ ಕೊಠಡಿಯನ್ನೂ ನಿರ್ಮಿಸಲಾಗಿದೆ.