ಸಮಿತಿಯಿಂದ ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ರಾಕ್ಷಸ ಸಂಸ್ಕೃತಿಯನ್ನು ಸದಾ ಅಗೌರವಿಸುವ ಕೆಲಸ ಸುಡುವ ಸಂಸ್ಕೃತಿಯಿಂದ ಆಗುತ್ತಿದೆ. ನಂಜನಗೂಡು ದೇವಸ್ಥಾನ ಮಂಡಳಿಯಿಂದ ಆಚರಣೆ ಹೆಸರಲ್ಲಿ ರಾಕ್ಷಸರ ಚಿತ್ರಗಳನ್ನು ರಸ್ತೆ ಮೇಲೆ ರಂಗೋಲಿಯಂತೆ ಬಿಡಿಸಿ, ಭಾವಚಿತ್ರದ ಬ್ಯಾನರ್ ಹಾಸಿ ತುಳಿದುಹೋಗುವ ವಿಕೃತಿ ತೋರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.