ಹೊಸ ನಾಯಕತ್ವ ಹಾಗೂ ಹೊಸಮುಖಗಳಿಗೆ ಬಿಜೆಪಿಯಲ್ಲಿ ಆದ್ಯತೆ ಸಿಗಲಿದೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ಸಂತೋಷ್ ಮಾತು ನಡೆಯುತ್ತದೆ. ಬಸವರಾಜ ಬೊಮ್ಮಾಯಿ ಈ ಮೊದಲು ನಮ್ಮೊಂದಿಗೆ ಜನತಾ ಪರಿವಾರದಲ್ಲಿ ಇದ್ದರೂ ನಮ್ಮ ರಾಜಕೀಯ ಪಟ್ಟುಗಳನ್ನು ಕಲಿಯಲಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.