ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ‘ಕಾರ್ಗಿಲ್ ಯುದ್ಧ ನನಗೆ ದೇಶ ಸೇವೆಯೊಂದಿಗೆ ಅನೇಕ ಜೀವನ ಸಂದೇಶ ನೀಡಿತು. ಯುದ್ಧದಲ್ಲಿ ಭೀಕರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ, ಜೀವನವೇ ಬೇಡ ಎನ್ನುವಾಗ, ಮೃತ ಯೋಧನ ತಾಯಿಯೊಬ್ಬರ ಅಭಿಮಾನದ ಮಾತುಗಳು ನನ್ನನ್ನು ಎಚ್ಚರಿಸಿದವು. ಆಕೆ, ದೇಶಕ್ಕಾಗಿ ಮಗನ ಸಾವಾದುದು ತನಗೆ ಸಿಕ್ಕ ದೊಡ್ಡ ಉಡುಗೊರೆ’ ಎಂದಳು. ಇದು, ಈ ನೆಲದ ತಾಯಂದಿರ ತ್ಯಾಗ, ದೇಶ ಭಕ್ತಿಯನ್ನು ತೋರುತ್ತದೆ’ ಎಂದರು.