‘ರಂಗಾಯಣವು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಪ್ರದರ್ಶನ ಪ್ರವಾಸವನ್ನು ಜ.27ರಿಂದ ಫೆ.15ರವರೆಗೆ 2ನೇ ಹಂತದಲ್ಲಿ ಆರಂಭಿಸಿದೆ. ಜ.27ರಂದು ಹುಬ್ಬಳ್ಳಿ, ಜ.29ರಂದು ಧಾರವಾಡ, ಜ.31ರಂದು ಬೆಳಗಾವಿ, ಫೆ.2ರಂದು ವಿಜಯಪುರ, ಫೆ.5ರಂದು ಬಾಗಲಕೋಟೆ, ಫೆ.8ರಂದು ಬೀದರ್, ಫೆ.8 ಹಾಗೂ 10ರಂದು ಕಲಬುರಗಿ, ಫೆ.12ರಂದು ರಾಯಚೂರು, ಫೆ.14ರಂದು ಬಳ್ಳಾರಿಯಲ್ಲಿ ಪ್ರದರ್ಶನ ಇರಲಿದೆ. ಈ ಎಲ್ಲಾ ಕಡೆಯೂ ಬಹುತೇಕ ಟಿಕೆಟ್ಗಳು ಖರೀದಿಯಾಗಿವೆ. ಒಟ್ಟು ನೂರು ಪ್ರದರ್ಶನಗಳ ಗುರಿಯೊಂದಿಗೆ ಹೊರಟಿರುವ ರಂಗಾಯಣ ಫೆಬ್ರವರಿ ಅಂತ್ಯಕ್ಕೆ 50 ಪ್ರದರ್ಶನಗಳನ್ನು ಮುಗಿಸಲಿದೆ.`ಟಿಪ್ಪು ನಿಜಕನಸುಗಳು’ ನಾಟಕ ಕೃತಿ ಮಾರಾಟದಲ್ಲೂ ದಾಖಲೆ ಬರೆದಿದೆ. ಈಗಾಗಲೇ 12ನೇ ಆವೃತ್ತಿ ಮುದ್ರಣ ಕಂಡಿದೆ’ ಎಂದು ಮಾಹಿತಿ ನೀಡಿದ್ದಾರೆ.