<p><strong>ಮೈಸೂರು</strong>: ‘ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗದಲ್ಲಿ ಕರ್ನಾಟಕದ ದಾರ್ಶನಿಕರ ಅಧ್ಯಯನ ಇಲ್ಲವಾಗಿರುವುದು ವಿಷಾದನೀಯ. ಸಂಸ್ಕೃತ ಹಾಗೂ ಪಶ್ಚಿಮದ ದಾರ್ಶನಿಕರ ಅಧ್ಯಯನವನ್ನಷ್ಟೇ ಮಾಡಬೇಕೆನ್ನುವುದು ಶೈಕ್ಷಣಿಕ ಅಪರಾಧ’ ಎಂದು ಪ್ರೊ.ರಹಮತ್ ತರೀಕೆರೆ ಪ್ರತಿಪಾದಿಸಿದರು.</p>.<p>ನಗರದ ಮಾನಸಗಂಗೋತ್ರಿಯ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಗುರುವಾರ ಅಂಬೇಡ್ಕರ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ‘ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ಸಂತ ಕಬೀರ್ದಾಸ್ ಚಿಂತನೆಗಳ ತಾತ್ವಿಕ ನೆಲೆಗಳು’ ಕುರಿತು ಮಾತನಾಡಿದರು.</p>.<p>‘ತತ್ವಶಾಸ್ತ್ರದಲ್ಲಿ ಆರೂಢ, ಅವಧೂತರ ತತ್ವಪದ, ಶರಣ, ಸೂಫಿಗಳ ಅಧ್ಯಯನವಿಲ್ಲ. ಅಭಿನವಗುಪ್ತರಿಗೆ ಸಮಾನವಾಗಿ ಚಿಂತಿಸಿದ ಅಲ್ಲಮಪ್ರಭು, ಅಂಬೇಡ್ಕರ್ ತಮ್ಮ ಗುರುವಾಗಿ ಸ್ವೀಕರಿಸಿದ ಕಬೀರ್ದಾಸ್ ಕುರಿತು ಅಧ್ಯಯನವೇ ಇಲ್ಲ. ನಮ್ಮ ನೆಲದ ತತ್ವಶಾಸ್ತ್ರವನ್ನು ಯಾಕೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>‘ರಾಜ್ಯದ ಎಲ್ಲಾ ತತ್ವಶಾಸ್ತ್ರ ಅಧ್ಯಯನ ಕೇಂದ್ರಗಳಲ್ಲಿ ಕರ್ನಾಟಕದ ದಾರ್ಶನಿಕರ ಕುರಿತ ಅಧ್ಯಯನಕ್ಕೆ ಅವಕಾಶವಿರಬೇಕು’ ಎಂದು ಆಗ್ರಹಿಸಿದರು.</p>.<p>‘ತತ್ವಶಾಸ್ತ್ರವನ್ನು ನಾವು ಸದಾ ಧರ್ಮಕ್ಕೆ ಸೇರಿಸಿಬಿಡುತ್ತೇವೆ. ಅದು ತಪ್ಪು. ತತ್ವಶಾಸ್ತ್ರವು ಧರ್ಮಕ್ಕೆ ಹೊರತಾದ ವಿಚಾರ. ಹುಟ್ಟು ಹಾಗೂ ವೃತ್ತಿಯ ಕಾರಣಕ್ಕಾಗಿ ಕೀಳಾಗಿ ಕಾಣುವ ಸಮಾಜದಲ್ಲಿ ದಾರ್ಶನಿಕರು ಹುಟ್ಟಿಕೊಂಡಿದ್ದು, ಜ್ಞಾನಮಾರ್ಗದ ಮೂಲಕ ತಮ್ಮನ್ನು ಗುರುತಿಸುವಂತ ಸಾಧನೆ ಮಾಡಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗದಲ್ಲಿ ಕರ್ನಾಟಕದ ದಾರ್ಶನಿಕರ ಅಧ್ಯಯನ ಇಲ್ಲವಾಗಿರುವುದು ವಿಷಾದನೀಯ. ಸಂಸ್ಕೃತ ಹಾಗೂ ಪಶ್ಚಿಮದ ದಾರ್ಶನಿಕರ ಅಧ್ಯಯನವನ್ನಷ್ಟೇ ಮಾಡಬೇಕೆನ್ನುವುದು ಶೈಕ್ಷಣಿಕ ಅಪರಾಧ’ ಎಂದು ಪ್ರೊ.ರಹಮತ್ ತರೀಕೆರೆ ಪ್ರತಿಪಾದಿಸಿದರು.</p>.<p>ನಗರದ ಮಾನಸಗಂಗೋತ್ರಿಯ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಗುರುವಾರ ಅಂಬೇಡ್ಕರ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ‘ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ಸಂತ ಕಬೀರ್ದಾಸ್ ಚಿಂತನೆಗಳ ತಾತ್ವಿಕ ನೆಲೆಗಳು’ ಕುರಿತು ಮಾತನಾಡಿದರು.</p>.<p>‘ತತ್ವಶಾಸ್ತ್ರದಲ್ಲಿ ಆರೂಢ, ಅವಧೂತರ ತತ್ವಪದ, ಶರಣ, ಸೂಫಿಗಳ ಅಧ್ಯಯನವಿಲ್ಲ. ಅಭಿನವಗುಪ್ತರಿಗೆ ಸಮಾನವಾಗಿ ಚಿಂತಿಸಿದ ಅಲ್ಲಮಪ್ರಭು, ಅಂಬೇಡ್ಕರ್ ತಮ್ಮ ಗುರುವಾಗಿ ಸ್ವೀಕರಿಸಿದ ಕಬೀರ್ದಾಸ್ ಕುರಿತು ಅಧ್ಯಯನವೇ ಇಲ್ಲ. ನಮ್ಮ ನೆಲದ ತತ್ವಶಾಸ್ತ್ರವನ್ನು ಯಾಕೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>‘ರಾಜ್ಯದ ಎಲ್ಲಾ ತತ್ವಶಾಸ್ತ್ರ ಅಧ್ಯಯನ ಕೇಂದ್ರಗಳಲ್ಲಿ ಕರ್ನಾಟಕದ ದಾರ್ಶನಿಕರ ಕುರಿತ ಅಧ್ಯಯನಕ್ಕೆ ಅವಕಾಶವಿರಬೇಕು’ ಎಂದು ಆಗ್ರಹಿಸಿದರು.</p>.<p>‘ತತ್ವಶಾಸ್ತ್ರವನ್ನು ನಾವು ಸದಾ ಧರ್ಮಕ್ಕೆ ಸೇರಿಸಿಬಿಡುತ್ತೇವೆ. ಅದು ತಪ್ಪು. ತತ್ವಶಾಸ್ತ್ರವು ಧರ್ಮಕ್ಕೆ ಹೊರತಾದ ವಿಚಾರ. ಹುಟ್ಟು ಹಾಗೂ ವೃತ್ತಿಯ ಕಾರಣಕ್ಕಾಗಿ ಕೀಳಾಗಿ ಕಾಣುವ ಸಮಾಜದಲ್ಲಿ ದಾರ್ಶನಿಕರು ಹುಟ್ಟಿಕೊಂಡಿದ್ದು, ಜ್ಞಾನಮಾರ್ಗದ ಮೂಲಕ ತಮ್ಮನ್ನು ಗುರುತಿಸುವಂತ ಸಾಧನೆ ಮಾಡಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>