ಮೈಸೂರು: ದಸರಾ ಮಹೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮಗಳು ವರ್ಚುಯಲ್ (ಆನ್ಲೈನ್ ವೇದಿಕೆ) ಆಗಿ ನಡೆಯಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮೈಸೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಹಾಗೂ ದಸರಾ ಆಚರಣೆ ಸಂಬಂಧ ಗುರುವಾರ ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಸಂವಾದದಲ್ಲಿ ಮಾತನಾಡಿ ಹಲವಾರು ಸಲಹೆ ನೀಡಿದರು. ನಾಡಹಬ್ಬದ ಆಚರಣೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಒಂದು ವಾರದಲ್ಲಿ ಪ್ರತ್ಯೇಕ ವರದಿ ನೀಡಬೇಕೆಂದು ಹೇಳಿದರು.