ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕ ಹನೂರು ಕೃಷ್ಣಮೂರ್ತಿ ಅವರ ‘ಅನಾಮಧೇಯನ ಆತ್ಮಕತೆ’ ಕೃತಿಯ ಆಯ್ದ ಭಾಗವನ್ನು ಓದಿ ಹೇಳಿದರು. ಈ ಕಾದಂಬರಿ ದಾಖಲೆಗಳು, ಉಲ್ಲೇಖಗಳನ್ನಾಧರಿಸಿ ರಚನೆಯಾಗಿದೆ. ನೈಜತೆಗೆ ಹತ್ತಿರವಾಗಿದೆ. ಇದರಲ್ಲಿ ಟಿಪ್ಪು ಕಾಲದ ದಳವಾಯಿ ಕೈಗೆ ಸಿಕ್ಕಿಬಿದ್ದ ಗಾಯಾಳು ಬ್ರಿಟಿಷ್ ಸೈನಿಕ, ‘ಸುಸ್ತಾಗಿದ್ದ ಟಿಪ್ಪುವನ್ನು ನಾನೇ ಗುಂಡಿಟ್ಟು ಕೊಂದೆ, ಆದರೆ ಕೊಂದಾದ ಬಳಿಕ ಅದು ಟಿಪ್ಪು ಎಂದು ತಡವಾಗಿ ಅರಿವಾಯಿತು’ ಎಂಬ ಉಲ್ಲೇಖವನ್ನು ವಿವರಿಸಿದರು.