‘ಸುದೀರ್ಘ ಕಾಲದವರೆಗೆ ಜೀರ್ಣವಾಗದ ವಸ್ತುಗಳನ್ನು ತಿಮಿಂಗಲ ವಾಂತಿ ಮಾಡಿದಾಗ ಅದು ಮೇಣದ ರೂಪದಲ್ಲಿ ಸಮುದ್ರದಲ್ಲಿ ತೇಲುತ್ತದೆ. ಸುಗಂಧದ್ರವ್ಯ ಹಾಗೂ ಔಷಧ ತಯಾರಿಕಾ ಕ್ಷೇತ್ರದಲ್ಲಿ ಅದನ್ನು ಹೆಚ್ಚು ಬಳಸಲಾಗುತ್ತದೆ. ವಿಶೇಷವಾಗಿ ಕತಾರ್, ದುಬೈ ಹಾಗೂ ಚೀನಾದಲ್ಲಿ ಬಹು ಬೇಡಿಕೆ ಇದೆ. ಕಾಳಸಂತೆಯಲ್ಲಿ ಪ್ರತಿ ಕೆ.ಜಿಗೆ ₹ 3 ಕೋಟಿಯವರೆಗೂ ದರವಿದೆ’ ಎಂದು ಮೂಲಗಳು ತಿಳಿಸಿವೆ.