‘ಪುನರುಜ್ಜೀವನಕ್ಕೆ ₹ 18 ಕೋಟಿ’
‘ನೀರಿನ ಸಂಸ್ಕರಣೆ ಹಾಗೂ ಕೆರೆ ಅಭಿವೃದ್ಧಿಗೆ ₹ 18 ಕೋಟಿ ಅನುದಾನವನ್ನು ಸರ್ಕಾರವು ಮೀಸಲಿರಿಸಿದೆ. ಅದರಲ್ಲಿ ₹ 4 ಕೋಟಿ ವೆಚ್ಚದಲ್ಲಿ ನೀರಿನ ಮರುಬಳಕೆಗೆ ಸಂಸ್ಕರಣ ಘಟಕಗಳನ್ನು (ಎಸ್ಟಿಪಿ) ಸ್ಥಾಪಿಸುವ ಪ್ರಸ್ತಾವವಿದೆ’ ಎಂದು ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ ಹೇಳಿದ್ದಾರೆ. ‘ಸಂಸ್ಕರಣ ಘಟಕಗಳಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಮತ್ತೆ ಹರಿಸಲು ಪಂಪ್ ಮತ್ತು ಪೈಪ್ಲೇನ್ ಒಳಹರಿವು ನೀರಿಗೆ ಶುದ್ಧೀಕರಣ ವ್ಯವಸ್ಥೆ ಗಾಜಿನ ಸೇತುವೆ ವಿಹಾರ ಪಥ ವೀಕ್ಷಣಾ ಗೋಪುರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಯೋಜನೆಯಾಗಿದೆ’ ಎಂದು ಫೇಸ್ಬುಕ್ನಲ್ಲಿ ಅವರು ಬರೆದುಕೊಂಡಿದ್ದಾರೆ.