ಜಾನುವಾರು ಸಂತೆಗೆ ಸೇತುವೆ ಹಾದು ಹೋದ ರೈತರು: ಪ್ರತಿ ಭಾನುವಾರ ದನಗಳ ಸಂತೆಯನ್ನು ಎಚ್.ಡಿ. ಕೋಟೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್ನಲ್ಲಿ ನಡೆಸಲಾಗುತ್ತದೆ. ಅದರಂತೆ ಭಾನುವಾರ ಬೆಳಿಗ್ಗೆಯೇ ಸೇತುವೆ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಬೆಳಗನಹಳ್ಳಿ ಮತ್ತು ಹೊಸತೊರವಳ್ಳಿ ರೈತರು ಜಾನುವಾರುಗಳ ಜೊತೆ ತುಂಬಿ ಹರಿಯುತ್ತಿರುವ ಸೇತುವೆಯನ್ನು ದಾಟಿ ಸಂತೆಗೆ ತೆರಳಿದರು. ಸಂಜೆಯಾಗುತ್ತಿದ್ದಂತೆ ಸೇತುವೆ ಮೇಲಿನ ಹರಿವು ಕಡಿಮೆಯಾಗಿದ್ದು, ಸಹಜ ಸ್ಥಿತಿಗೆ ಮರಳಿದೆ.