‘ಶಿವರಾಮ ಕಾರಂತರ ಹೆಸರಿನಲ್ಲಿ ಹುಟ್ಟೂರ ಪ್ರಶಸ್ತಿಯನ್ನು ಕಳೆದ ಕೆಲ ವರ್ಷಗಳಿಂದ ಕೊಡಮಾಡಲಾಗುತ್ತಿದೆ. ಕಾರಂತ ಅವರು ಕಂಡದ್ದನ್ನು ಕಂಡಂತೆಯೇ ಹೇಳುವವರು. ಯಾವುದೇ ವಿಷಯದಲ್ಲಿ ರಾಜಿ ಆಗುತ್ತಿರಲಿಲ್ಲ. ಕಂಡದ್ದನ್ನು ಕಂಡಂತೆಯೇ ಹೇಳುವುದರಲ್ಲಿ ಕಾರಂತ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡದ ಮತ್ತೊಬ್ಬ ಸಾಹಿತಿ ಎಸ್.ಎಲ್.ಭೈರಪ್ಪ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.