ಮೈಸೂರಿನ ಭೈರನಾಯ್ಕ, ಕೆಸರೆಯ ಗವಿರಂಗಪ್ಪ ಕ್ರಮವಾಗಿ ಫಯಾಜ್ ಖುರೇಶಿ, ಪಡುವಾರಹಳ್ಳಿಯ ಮಾಯಂಕ ವಿರುದ್ಧ ಜಯ ಸಾಧಿಸಿದರೆ, ಆಲನಹಳ್ಳಿ ಖಯ್ಯಾಮ್ ವಿರುದ್ಧ ಆರ್.ಕೆ.ನಿತಿನ್ ಗೆಲುವು ಪಡೆದರು. 6 ನಿಮಿಷಗಳ ಹಣಾಹಣಿಯಲ್ಲಿ ಖಯ್ಯಾಮ್ ಗಾಯಗೊಂಡರು. ರಕ್ಷಣೆಗೆ ಮೊಣಕೈ ಒಡ್ಡಿದಾಗ ಮೂಳೆ ಮುರಿಯಿತು. ಪೈಲ್ವಾನ್ ಅಹ್ಮದ್ ಚಿಕಿತ್ಸೆ ನೀಡಿದರು.