<p><strong>ಶಿಕಾರಿಪುರ: </strong>ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>ರೇಖಾ ಪಾಟೀಲ್, ಶಿವರಾಜ್, ಗೋಪಾಲ, ವಿಜಯಕುಮಾರ್, ಗಂಗಾಧರಪ್ಪ ಬಂಧಿತರು.</p>.<p class="Subhead">ಪ್ರಕರಣದ ವಿವರ: ಈಸೂರು ಗ್ರಾಮದ ರೇಖಾ ಪಾಟೀಲ್ ಗ್ರಾಮದ ಬಸವರಾಜಪ್ಪ ಅವರಿಗೆ ₹ 16 ಲಕ್ಷ ನೀಡಬೇಕಾಗಿತ್ತು. ಹಣ ನೀಡಲು ಸಾಧ್ಯವಾಗದ ಕಾರಣ ಬಸವರಾಜಪ್ಪ ಅವರನ್ನು ಅಪಹರಿಸಲು ರೇಖಾ ಸುಫಾರಿ ನೀಡಿದ್ದರು.</p>.<p>ಅಪಹರಣಕಾರರು ಜ. 1ರಂದು ನನ್ನನ್ನು ಕಾರಿನಲ್ಲಿ ಅಪಹರಿಸಿ ಸಾಗರ ತಾಲ್ಲೂಕಿನ ಕೊರಲಿಕೊಪ್ಪ ಗ್ರಾಮ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ 4 ಖಾಲಿ ಛಾಪಾಕಾಗದ ಮೇಲೆ ಸಹಿ ಪಡೆದಿದ್ದರು.ಹಲ್ಲೆ ಬಳಿಕ ಬಸವರಾಜಪ್ಪ ಮೃತಪಟ್ಟಿದ್ದಾರೆ ಎಂದು ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಪತ್ನಿಗೆ ಕರೆ ಮಾಡಿದ ಬಸವರಾಜಪ್ಪ ವಿಷಯ ತಿಳಿಸಿದ್ದರು.</p>.<p>ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ: </strong>ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>ರೇಖಾ ಪಾಟೀಲ್, ಶಿವರಾಜ್, ಗೋಪಾಲ, ವಿಜಯಕುಮಾರ್, ಗಂಗಾಧರಪ್ಪ ಬಂಧಿತರು.</p>.<p class="Subhead">ಪ್ರಕರಣದ ವಿವರ: ಈಸೂರು ಗ್ರಾಮದ ರೇಖಾ ಪಾಟೀಲ್ ಗ್ರಾಮದ ಬಸವರಾಜಪ್ಪ ಅವರಿಗೆ ₹ 16 ಲಕ್ಷ ನೀಡಬೇಕಾಗಿತ್ತು. ಹಣ ನೀಡಲು ಸಾಧ್ಯವಾಗದ ಕಾರಣ ಬಸವರಾಜಪ್ಪ ಅವರನ್ನು ಅಪಹರಿಸಲು ರೇಖಾ ಸುಫಾರಿ ನೀಡಿದ್ದರು.</p>.<p>ಅಪಹರಣಕಾರರು ಜ. 1ರಂದು ನನ್ನನ್ನು ಕಾರಿನಲ್ಲಿ ಅಪಹರಿಸಿ ಸಾಗರ ತಾಲ್ಲೂಕಿನ ಕೊರಲಿಕೊಪ್ಪ ಗ್ರಾಮ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ 4 ಖಾಲಿ ಛಾಪಾಕಾಗದ ಮೇಲೆ ಸಹಿ ಪಡೆದಿದ್ದರು.ಹಲ್ಲೆ ಬಳಿಕ ಬಸವರಾಜಪ್ಪ ಮೃತಪಟ್ಟಿದ್ದಾರೆ ಎಂದು ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಪತ್ನಿಗೆ ಕರೆ ಮಾಡಿದ ಬಸವರಾಜಪ್ಪ ವಿಷಯ ತಿಳಿಸಿದ್ದರು.</p>.<p>ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>