ಪ್ರಕರಣದ ವಿವರ: ಈಸೂರು ಗ್ರಾಮದ ರೇಖಾ ಪಾಟೀಲ್ ಗ್ರಾಮದ ಬಸವರಾಜಪ್ಪ ಅವರಿಗೆ ₹ 16 ಲಕ್ಷ ನೀಡಬೇಕಾಗಿತ್ತು. ಹಣ ನೀಡಲು ಸಾಧ್ಯವಾಗದ ಕಾರಣ ಬಸವರಾಜಪ್ಪ ಅವರನ್ನು ಅಪಹರಿಸಲು ರೇಖಾ ಸುಫಾರಿ ನೀಡಿದ್ದರು.
ಅಪಹರಣಕಾರರು ಜ. 1ರಂದು ನನ್ನನ್ನು ಕಾರಿನಲ್ಲಿ ಅಪಹರಿಸಿ ಸಾಗರ ತಾಲ್ಲೂಕಿನ ಕೊರಲಿಕೊಪ್ಪ ಗ್ರಾಮ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ 4 ಖಾಲಿ ಛಾಪಾಕಾಗದ ಮೇಲೆ ಸಹಿ ಪಡೆದಿದ್ದರು.ಹಲ್ಲೆ ಬಳಿಕ ಬಸವರಾಜಪ್ಪ ಮೃತಪಟ್ಟಿದ್ದಾರೆ ಎಂದು ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಪತ್ನಿಗೆ ಕರೆ ಮಾಡಿದ ಬಸವರಾಜಪ್ಪ ವಿಷಯ ತಿಳಿಸಿದ್ದರು.
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.