ಸಾಹಸ ಪ್ರದರ್ಶಿಸಿದ ಯುವಕರನ್ನು ಶಾಸಕ ಡಾ.ಅವಿನಾಶ ಜಾಧವ ಗುರುವಾರ ತಾಲ್ಲೂಕಿನ ಕಲ್ಲೂರು ರೋರ್ ಗ್ರಾಮದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಇಒ ಅನಿಲ ರಾಠೋಡ್, ಬಿಜೆಪಿ ಮುಖಂಡ ವಿಶ್ವನಾಥ ಈದಲಾಯಿ, ವೀರಾರೆಡ್ಡಿ ಪಾಟೀಲ, ಜಗದೀಶಸಿಂಗ್ ಠಾಕೂರ, ಶ್ರೀನಿವಾಸ ಚಿಂಚೋಳಿಕರ ಇದ್ದರು.