2012ರಲ್ಲಿ ಕೊಳಚೆ ನಿವಾಸಿಗಳಿಗೆ ನೀಡಿರುವ 2741 ಮನೆಗಳ ಖಾತೆ ಮಾಡಬೇಕು.ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಬೇಕು. ಅಮೀರ್ ಅಹಮದ್ ಕಾಲೊನಿ ಎರಡನೇ ಹಂತ ಹಾಗೂ ಕರ್ಲಹಟ್ಟಿ ಕೊಳಚೆ ಪ್ರದೇಶದ 41 ಮನೆಗಳಿಗೆ, ಡಾ.ಅಂಬೇಡ್ಕರ್ ಕಾಲೊನಿ, ಜನತಾ ಕಾಲೊನಿ, ಸತ್ಯ ಹರಿಶ್ಚಂದ್ರ ನಗರ, ಕೆಳಗಿನ ತುಂಗಾನಗರ ಎರಡನೇ ಹಂತ, ಇಮಾಮ್ ಬಾಡಾ, ಸಿದ್ದೇಶ್ವರ ನಗರದ 600 ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದುಆಗ್ರಹಿಸಿದರು.