ಹುಣಸಗಿ: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ 22 ಕ್ರಸ್ಟ್ ಗೇಟುಗಳ ಮೂಲಕ ಮಂಗಳವಾರ ರಾತ್ರಿಯಿಂದ 1.36 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.
90,000 ಸಾವಿರ ಕ್ಯುಸೆಕ್ ಜಲಾಶಯಕ್ಕೆ ಒಳಹರಿವಿದ್ದರೆ 1,36,700 ಕ್ಯುಸೆಕ್ ಕೃಷ್ಣಾ ನದಿಗೆ, 6,000 ಕ್ಯುಸೆಕ್ ಜಲವಿದ್ಯುತ್ಗೆ, 4,500 ಕ್ಯುಸೆಕ್ ನೀರು ಕಾಲುವೆಗೆ ಹರಿಸಲಾಗುತ್ತಿದೆ.
ಕಳೆದ ಒಂದು ವಾರದಿಂದ ಕೃಷ್ಣಾ ಜಲನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಜಲಾಶಯಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದೆ. ಪ್ರತಿ ಗಂಟೆಗೊಮ್ಮೆ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಗರಿಷ್ಠ ಮಟ್ಟ 492.25 ಮೀಟರ್ ಇದ್ದು, 491.72 ಮೀಟರ್ ಕಾಯ್ದುಕೊಂಡು ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಲ್ಲದೇ 1.80 ಲಕ್ಷ ಕ್ಯುಸೆಕ್ ನೀರು ತಲುಪುವ ಸಾಧ್ಯತೆ ಇದೆ ಜಲಾಶಯದ ಮೂಲಗಳು ತಿಳಿಸಿವೆ.