<p><strong>ಶಕ್ತಿನಗರ</strong>: ದೇವಸುಗೂರು ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಸುರಿದ ಮಳೆಗೆ 68 ಮನೆಗಳು ಭಾಗಶಃ ಕುಸಿದಿವೆ.</p>.<p>ದೇವಸೂಗೂರು–12, ಗಂಜಳ್ಳಿ–18, ಹನುಮನದೊಡ್ಡಿ –5, ಹೆಗ್ಗಸನಹಳ್ಳಿ –2, ಅರಷಣಿಗಿ–15, ಮೀರಾಪುರ–12 ಮತ್ತು ಕಾಡ್ಲೂರು ಗ್ರಾಮದಲ್ಲಿ 6 ಮನೆಗಳು ಕುಸಿದಿವೆ.</p>.<p>ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ಮಧುಕಾಂತ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಬಳಿಕ ಮಾತನಾಡಿದ ಅವರು,‘ಮಳೆಗೆ ಕುಸಿದ ಮನೆಗಳ ವೀಕ್ಷಣೆಗೆ ಸಮೀಕ್ಷಾ ತಂಡ ಆಗಮಿಸಲಿದೆ. ಎಷ್ಟು ಮನೆಗಳು ನೆಲಸಮವಾಗಿವೆ ಮತ್ತು ಎಷ್ಟು ಭಾಗಶಃ ಕುಸಿದಿವೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.</p>.<p>ಸಗಮಕುಂಟ ಗ್ರಾಮದಲ್ಲಿ 20 ಹೆಕ್ಟೇರ್, ಯರಗುಂಟ–30 ಹೆಕ್ಟೇರ್, ವಡ್ಲೂರು–40 ಹೆಕ್ಟೇರ್ ಸೇರಿ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ ಹಾಗೂ ತೊಗರಿ ಬೆಳೆ ನಾಶವಾಗಿದೆ ಎಂದು ದೇವಸೂಗೂರು ರೈತ ಸಂಪರ್ಕ ಕೇಂದ್ರದ ಪ್ರಭಾರ ಅಧಿಕಾರಿ ಸಂಜಯ ಅವರು ತಿಳಿಸಿದರು.</p>.<p>ಹೋಬಳಿ ವ್ಯಾಪ್ತಿಯಲ್ಲಿ ಸತತವಾಗಿ ಎರಡು ದಿನ ಸುರಿದ ಮಳೆಯಿಂದ ಆಗಿರುವ ಪರಿಣಾಮಗಳು ಈಗ ಗೋಚರಿಸುತ್ತಿವೆ.</p>.<p>ಜಲಾವೃತ್ತವಾಗಿದ್ದ ಹಲವು ಬಡಾವಣೆಗಳಲ್ಲಿ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು , ಜನರು ಬೀದಿಗೆ ಬಂದಿದ್ದಾರೆ. ರಸ್ತೆಗಳು ಕೂಡ ಹಾಳಾಗಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ನೋಡಿ, ರೈತರ ದಿಕ್ಕು ತೋಚದಂತೆ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಕ್ತಿನಗರ</strong>: ದೇವಸುಗೂರು ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಸುರಿದ ಮಳೆಗೆ 68 ಮನೆಗಳು ಭಾಗಶಃ ಕುಸಿದಿವೆ.</p>.<p>ದೇವಸೂಗೂರು–12, ಗಂಜಳ್ಳಿ–18, ಹನುಮನದೊಡ್ಡಿ –5, ಹೆಗ್ಗಸನಹಳ್ಳಿ –2, ಅರಷಣಿಗಿ–15, ಮೀರಾಪುರ–12 ಮತ್ತು ಕಾಡ್ಲೂರು ಗ್ರಾಮದಲ್ಲಿ 6 ಮನೆಗಳು ಕುಸಿದಿವೆ.</p>.<p>ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ಮಧುಕಾಂತ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಬಳಿಕ ಮಾತನಾಡಿದ ಅವರು,‘ಮಳೆಗೆ ಕುಸಿದ ಮನೆಗಳ ವೀಕ್ಷಣೆಗೆ ಸಮೀಕ್ಷಾ ತಂಡ ಆಗಮಿಸಲಿದೆ. ಎಷ್ಟು ಮನೆಗಳು ನೆಲಸಮವಾಗಿವೆ ಮತ್ತು ಎಷ್ಟು ಭಾಗಶಃ ಕುಸಿದಿವೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.</p>.<p>ಸಗಮಕುಂಟ ಗ್ರಾಮದಲ್ಲಿ 20 ಹೆಕ್ಟೇರ್, ಯರಗುಂಟ–30 ಹೆಕ್ಟೇರ್, ವಡ್ಲೂರು–40 ಹೆಕ್ಟೇರ್ ಸೇರಿ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ ಹಾಗೂ ತೊಗರಿ ಬೆಳೆ ನಾಶವಾಗಿದೆ ಎಂದು ದೇವಸೂಗೂರು ರೈತ ಸಂಪರ್ಕ ಕೇಂದ್ರದ ಪ್ರಭಾರ ಅಧಿಕಾರಿ ಸಂಜಯ ಅವರು ತಿಳಿಸಿದರು.</p>.<p>ಹೋಬಳಿ ವ್ಯಾಪ್ತಿಯಲ್ಲಿ ಸತತವಾಗಿ ಎರಡು ದಿನ ಸುರಿದ ಮಳೆಯಿಂದ ಆಗಿರುವ ಪರಿಣಾಮಗಳು ಈಗ ಗೋಚರಿಸುತ್ತಿವೆ.</p>.<p>ಜಲಾವೃತ್ತವಾಗಿದ್ದ ಹಲವು ಬಡಾವಣೆಗಳಲ್ಲಿ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು , ಜನರು ಬೀದಿಗೆ ಬಂದಿದ್ದಾರೆ. ರಸ್ತೆಗಳು ಕೂಡ ಹಾಳಾಗಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ನೋಡಿ, ರೈತರ ದಿಕ್ಕು ತೋಚದಂತೆ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>