<p><strong>ಕವಿತಾಳ</strong>: ಪಟ್ಟಣದಲ್ಲಿ 82 ವರ್ಷಗಳ ಹಿಂದೆ ಸ್ಥಾಪಿತವಾದ ಯೇಸುವಿನ ಪುನರುತ್ಥಾನ ದೇವಾಲಯ ಕೆಥೋಲಿಕ್ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.</p>.<p>ಜಗಮಗಿಸುವ ವಿದ್ಯುತ್ ದೀಪಗಳು, ಸಂತ ಮೇರಿ ಮಾತೆಯ ಅಲಂಕಾರ ಸೇರಿದಂತೆ ಆವರಣದಲ್ಲಿ ನಿರ್ಮಿಸಿದ ವಿವಿಧ ಮಾದರಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.</p>.<p>ದನದ ಕೊಟ್ಟಿಗೆಯಲ್ಲಿ ಯೇಸುವಿನ ಜನನವಾದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಗೋದಲಿ ಆಕರ್ಷಕವಾಗಿದೆ. ಅದೇ ರೀತಿ ಪಟ್ಟಣದ ಪೊಲೀಸ್ ಠಾಣೆ, ಆಸ್ಪತ್ರೆ, ನವಚೇತನ ಶಾಲೆ, ತ್ರಯಂಭಕೇಶ್ವರ ದೇವಸ್ಥಾನ, ಮಸೀದಿ ಮತ್ತಿತರ ಪ್ರಮುಖ ಸ್ಥಳಗಳ ಮಾದರಿಗಳು ಗಮನ ಸೆಳೆಯುತ್ತಿವೆ.</p>.<p>ಕ್ರಿಸ್ತನ ಜನನ ಕುರಿತು ಮಂಗಳವಾರ ರಾತ್ರಿ ಕ್ಯಾರೆಲ್ಸ್ ಹಾಡುಗಳ ಮೂಲಕ ರೂಪಕ ನಡೆಯಲಿದೆ ಮತ್ತು ಬುಧವಾರ ಕ್ರಿಸ್ಮಸ್ ಅಂಗವಾಗಿ ದಿವ್ಯ ಬಲಿಪೂಜೆ ಸೇರಿದಂತೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ.</p>.<p>‘ದೀರ್ಘ ಕಾಲದ ಇತಿಹಾಸ ಹೊಂದಿರುವ ಚರ್ಚ್ ಕವಿತಾಳ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಭಕ್ತರನ್ನು ಹೊಂದಿದೆ. ಬಡ ಕುಟುಂಬದ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುವುದು ಇಲ್ಲಿನ ವಿಶೇಷ’ ಎಂದು ಫಾದರ್ ಆನಂದ ಪ್ರಸಾದ ತಿಳಿಸಿದರು.</p>.<p>ಕೆಂಪು ಉಡುಪು, ತಲೆ ಮೇಲೆ ಕೆಂಪು ಬಣ್ಣದ ಉದ್ದನೆ ಟೋಪಿ ಧರಿಸಿ ಬಿಳಿ ಗಡ್ಡ ಬಿಟ್ಟ ಮರದ ಕೊಂಬೆಯ ಮೇಲೆ ಕುಳಿತು ಸಾರ್ವಜನಿಕರನ್ನು ಸ್ವಾಗತಿಸುತ್ತಿರುವ ‘ಸಾಂತಾಕ್ರೂಜ್’ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.</p>.<div><blockquote>ಯೇಸುವಿನ ಜನ್ಮದಿನ ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಚರ್ಚ್ಗೆ ಬರುವ ಭಕ್ತರಿಗೆ ಕೇಕ್ ವಿತರಣೆ ಸೇರಿದಂತೆ ವಿಶೇಷ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿದೆ</blockquote><span class="attribution"> ಆನಂದ ಪ್ರಸಾದ ಚರ್ಚ್ ಫಾದರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಪಟ್ಟಣದಲ್ಲಿ 82 ವರ್ಷಗಳ ಹಿಂದೆ ಸ್ಥಾಪಿತವಾದ ಯೇಸುವಿನ ಪುನರುತ್ಥಾನ ದೇವಾಲಯ ಕೆಥೋಲಿಕ್ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.</p>.<p>ಜಗಮಗಿಸುವ ವಿದ್ಯುತ್ ದೀಪಗಳು, ಸಂತ ಮೇರಿ ಮಾತೆಯ ಅಲಂಕಾರ ಸೇರಿದಂತೆ ಆವರಣದಲ್ಲಿ ನಿರ್ಮಿಸಿದ ವಿವಿಧ ಮಾದರಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.</p>.<p>ದನದ ಕೊಟ್ಟಿಗೆಯಲ್ಲಿ ಯೇಸುವಿನ ಜನನವಾದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಗೋದಲಿ ಆಕರ್ಷಕವಾಗಿದೆ. ಅದೇ ರೀತಿ ಪಟ್ಟಣದ ಪೊಲೀಸ್ ಠಾಣೆ, ಆಸ್ಪತ್ರೆ, ನವಚೇತನ ಶಾಲೆ, ತ್ರಯಂಭಕೇಶ್ವರ ದೇವಸ್ಥಾನ, ಮಸೀದಿ ಮತ್ತಿತರ ಪ್ರಮುಖ ಸ್ಥಳಗಳ ಮಾದರಿಗಳು ಗಮನ ಸೆಳೆಯುತ್ತಿವೆ.</p>.<p>ಕ್ರಿಸ್ತನ ಜನನ ಕುರಿತು ಮಂಗಳವಾರ ರಾತ್ರಿ ಕ್ಯಾರೆಲ್ಸ್ ಹಾಡುಗಳ ಮೂಲಕ ರೂಪಕ ನಡೆಯಲಿದೆ ಮತ್ತು ಬುಧವಾರ ಕ್ರಿಸ್ಮಸ್ ಅಂಗವಾಗಿ ದಿವ್ಯ ಬಲಿಪೂಜೆ ಸೇರಿದಂತೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ.</p>.<p>‘ದೀರ್ಘ ಕಾಲದ ಇತಿಹಾಸ ಹೊಂದಿರುವ ಚರ್ಚ್ ಕವಿತಾಳ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಭಕ್ತರನ್ನು ಹೊಂದಿದೆ. ಬಡ ಕುಟುಂಬದ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುವುದು ಇಲ್ಲಿನ ವಿಶೇಷ’ ಎಂದು ಫಾದರ್ ಆನಂದ ಪ್ರಸಾದ ತಿಳಿಸಿದರು.</p>.<p>ಕೆಂಪು ಉಡುಪು, ತಲೆ ಮೇಲೆ ಕೆಂಪು ಬಣ್ಣದ ಉದ್ದನೆ ಟೋಪಿ ಧರಿಸಿ ಬಿಳಿ ಗಡ್ಡ ಬಿಟ್ಟ ಮರದ ಕೊಂಬೆಯ ಮೇಲೆ ಕುಳಿತು ಸಾರ್ವಜನಿಕರನ್ನು ಸ್ವಾಗತಿಸುತ್ತಿರುವ ‘ಸಾಂತಾಕ್ರೂಜ್’ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.</p>.<div><blockquote>ಯೇಸುವಿನ ಜನ್ಮದಿನ ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಚರ್ಚ್ಗೆ ಬರುವ ಭಕ್ತರಿಗೆ ಕೇಕ್ ವಿತರಣೆ ಸೇರಿದಂತೆ ವಿಶೇಷ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿದೆ</blockquote><span class="attribution"> ಆನಂದ ಪ್ರಸಾದ ಚರ್ಚ್ ಫಾದರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>