ರಾಯಚೂರು: ಚಲನಚಿತ್ರ ನಟ ಶಿವರಾಜಕುಮಾರ್ ಹಾಗೂ ಗೀತಾ ದಂಪತಿ ಮಂತ್ರಾಲಯದಲ್ಲಿ ಶನಿವಾರ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದರು.
ಆನಂತರ, ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದರು. ಶ್ರೀಗಳು ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿದರು.
ರಾಯಚೂರಿನಲ್ಲಿ ಶನಿವಾರ ಸಂಜೆ ಶಿವರಾಜಕುಮಾರ್ ನಟನೆಯ125ನೇ ಚಲನಚಿತ್ರ 'ವೇದ' ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಅವರ ರಾಯರ ದರ್ಶನ ಪಡೆದರು.