ಜಾಗೃತಿ ಜಾಥಾವು ಕಾಲೇಜಿನಿಂದ ಆರಂಭಗೊಂಡು ಏಡ್ಸ್ ಸೊಂಕದಿರಲಿ - ಬಾಳು ಬಂಗಾರವಾಗಲಿ, ಏಡ್ಸ್ ಸೊಂಕಿತರೂ - ನಮ್ಮಂತೆ ಮಾನವರು, ನಮ್ಮ ಪ್ರೀತಿಯೇ - ಏಡ್ಸ್ ಪೀಡಿತರ ಆತ್ಮಶಕ್ತಿ, ಮುಂದೆ ಸಾಗಿರಿ - ಏಡ್ಸ್ ಕೊನೆಗೊಳಿಸಿರಿ ಎಂಬ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳ ಮೂಲಕ ಹಾದು ತಿಮ್ಮಾಪುರಪೇಟೆ ಮಾರ್ಗವಾಗಿ ಸಾಗಿ ಬಿ ಆರ್ ಬಿ ಕಾಲೇಜು ವೃತ್ತದಲ್ಲಿ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಿ ಜಾಥಾದಲ್ಲಿ ವಿಲೀನವಾಯಿತು.