<p><strong>ಹಟ್ಟಿ ಚಿನ್ನದ ಗಣಿ:</strong> ‘ಸ್ಧಳೀಯ ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಧಾನ ಕಾಂಗ್ರೆಸ್ ಕೈತಪ್ಪಲು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರೇ ಕಾರಣ’ ಎಂದು ಪ.ಪಂ.ಸದಸ್ಯ ಸಿರಾಜುದ್ದಿನ್ ಖುರೇಷಿ ಆರೋಪ ಮಾಡಿದ್ದಾರೆ.</p>.<p>ಹಟ್ಟಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ.ಪಂಯಲ್ಲಿ 6 ಜನ ಕಾಂಗ್ರೆಸ್ ಪಕ್ಷದ ಸದಸ್ಯರೇ ಇದ್ದರೂ ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿ.ಎಸ್.ಹೂಲಗೇರಿ ಅವರು ಪಕ್ಷೇತರ ಅಭ್ಯರ್ಥಿಯ ಜತೆ ಹೊಂದಾಣಿಕೆ ಮಾಡಿಕೊಂಡು, ಅಧ್ಯಕ್ಷ ಪಟ್ಟ ಬಿಟ್ಟು ಕೊಡಬೇಕಾಯಿತು. 25 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ನನಗೂ ಮೋಸ ಮಾಡಿದ್ದಾರೆ, ಇದನ್ನು ಖಂಡಿಸಬೇಕು’ ಎಂದರು.</p>.<p>‘ನಾನು ಅಮರೇಗೌಡ ಬಯ್ಯಾಪೂರ ಅವರ ಬಣ ಎನ್ನುವ ಕಾರಣಕ್ಕೆ ಮೋಸ ಮಾಡಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ’ ಎಂದು ದೂರಿದರು.</p>.<p>‘ಮಾಜಿ ಶಾಸಕ ಹೂಲಗೇರಿ ಅವರು ಹಾಗೂ ಗೋವಿಂದ ನಾಯಕ, ಹಮ್ಮದ್ ಬಾಬಾ, ಅಧ್ಯಕ್ಷ ಎನಿಸಿಕೊಂಡವರು ಒಂದು ದಿನವೂ ಸದಸ್ಯರ ಸಭೆ ನಡೆಸಿಲ್ಲ, ಇಂತವರು ಅಧ್ಯಕ್ಷರಾಗಿದ್ದಾರೆ’ ಎಂದರು.</p>.<p>‘ಅಮರೇಗೌಡ ಬಯ್ಯಾಪೂರ, ಹಾಗೂ ಶರಣುಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಡಿ.ಎಸ್.ಹೂಲಗೇರಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಹೈಕಮಾಂಡ್ಗೆ ಪತ್ರ ಬರೆಯಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ‘ಸ್ಧಳೀಯ ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಧಾನ ಕಾಂಗ್ರೆಸ್ ಕೈತಪ್ಪಲು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರೇ ಕಾರಣ’ ಎಂದು ಪ.ಪಂ.ಸದಸ್ಯ ಸಿರಾಜುದ್ದಿನ್ ಖುರೇಷಿ ಆರೋಪ ಮಾಡಿದ್ದಾರೆ.</p>.<p>ಹಟ್ಟಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ.ಪಂಯಲ್ಲಿ 6 ಜನ ಕಾಂಗ್ರೆಸ್ ಪಕ್ಷದ ಸದಸ್ಯರೇ ಇದ್ದರೂ ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿ.ಎಸ್.ಹೂಲಗೇರಿ ಅವರು ಪಕ್ಷೇತರ ಅಭ್ಯರ್ಥಿಯ ಜತೆ ಹೊಂದಾಣಿಕೆ ಮಾಡಿಕೊಂಡು, ಅಧ್ಯಕ್ಷ ಪಟ್ಟ ಬಿಟ್ಟು ಕೊಡಬೇಕಾಯಿತು. 25 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ನನಗೂ ಮೋಸ ಮಾಡಿದ್ದಾರೆ, ಇದನ್ನು ಖಂಡಿಸಬೇಕು’ ಎಂದರು.</p>.<p>‘ನಾನು ಅಮರೇಗೌಡ ಬಯ್ಯಾಪೂರ ಅವರ ಬಣ ಎನ್ನುವ ಕಾರಣಕ್ಕೆ ಮೋಸ ಮಾಡಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ’ ಎಂದು ದೂರಿದರು.</p>.<p>‘ಮಾಜಿ ಶಾಸಕ ಹೂಲಗೇರಿ ಅವರು ಹಾಗೂ ಗೋವಿಂದ ನಾಯಕ, ಹಮ್ಮದ್ ಬಾಬಾ, ಅಧ್ಯಕ್ಷ ಎನಿಸಿಕೊಂಡವರು ಒಂದು ದಿನವೂ ಸದಸ್ಯರ ಸಭೆ ನಡೆಸಿಲ್ಲ, ಇಂತವರು ಅಧ್ಯಕ್ಷರಾಗಿದ್ದಾರೆ’ ಎಂದರು.</p>.<p>‘ಅಮರೇಗೌಡ ಬಯ್ಯಾಪೂರ, ಹಾಗೂ ಶರಣುಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಡಿ.ಎಸ್.ಹೂಲಗೇರಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಹೈಕಮಾಂಡ್ಗೆ ಪತ್ರ ಬರೆಯಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>