ರಾಯಚೂರು ಜಿಲ್ಲೆಯ ರೈತರು ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಮತ್ತು ಜೋಗುಳಾಂಬಾ ಗದ್ವಾಲ್ ಜಿಲ್ಲೆಯಿಂದ ಅನೇಕ ರೈತರು ಕೃಷಿ ಉತ್ನನ್ನಗಳನ್ನು ಮಾರಾಟಕ್ಕೆ ತಂದು, ನಿರಾಸೆ ಅನುಭವಿಸಬೇಕಾಯಿತು. ಪ್ರತಿದಿನ ರೈತರು ಮಧ್ಯಾಹ್ನವೇ ಕೃಷಿ ಉತ್ಪನ್ನವನ್ನು ಹರಾಜಿನಲ್ಲಿ ಮಾರಾಟ ಮಾಡಿ, ಕಮಿಷನ್ ಏಜೆಂಟ್ರಿಂದ ಸಂಜೆ ಹಣ ಪಡೆದು ವಾಪಸ್ಸಾಗುತ್ತಿದ್ದರು. ಮಾರಾಟದ ದಿನವೇ ಹಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿಯೇ ನೆರೆಯ ರಾಜ್ಯಗಳಿಂದಲೂ ರಾಯಚೂರು ಎಪಿಎಂಸಿಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತೆಗೆದುಕೊಂಡು ಬರುತ್ತಾರೆ. ಆದರೆ, ಗುರುವಾರ ಮಾತ್ರ ವಹಿವಾಟು ಸಾಧ್ಯವಾಗದೆ ತೊಂದರೆಗೀಡಾದರು.