<p>ಸಿಂಧನೂರು: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬ್ರಾಹ್ಮಣ ಸಮಾಜದ ನಗರಸಭೆ ಸದಸ್ಯೆ ಸರಿತಾ ವೆಂಕಟೇಶ ಬಂಡಿ ಅವರಿಗೆ ನೀಡಬೇಕು ಎಂದು ಬ್ರಾಹ್ಮಣ ಸಮಾಜದ ಮುಖಂಡರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಮಾಡಿದರು.</p>.<p>ಅಧ್ಯಕ್ಷ ಗೋವಿಂದರಾವ್ ಮಾತನಾಡಿ, ಸಿಂಧನೂರು ಪುರಸಭೆ ಹಾಗೂ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಒಮ್ಮೆಯೂ ಬ್ರಾಹ್ಮಣ ಸಮಾಜದ ಸದಸ್ಯರಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ನೀಡಿಲ್ಲ. ಈ ಭಾರಿ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಒಂದನ್ನಾದರು ನಮ್ಮ ಸಮುದಾಯಕ್ಕೆ ನೀಡಬೇಕೆಂದು ಕೋರಿದರು.</p>.<p>ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಹ್ಲಾದಗುಡಿ ವಕೀಲ, ರಾಮಕೃಷ್ಣಾಚಾರ್ ಗೋನ್ವಾರ್, ನರಸಿಂಹಾಚಾರ್ ಮಠಾಧಿಕಾರ್, ನರಸಿಂಗ್ರಾವ್ ಚನ್ನಳ್ಳಿ, ವೆಂಕಣ್ಣಚಾರ್ ದೋಟಿಹಾಳ, ಆರ್.ವಿ.ಜೋಷಿ, ಎಂ.ಕೆ.ಗೌರಕರ್, ತಿರುಮಲರಾವ್ ಕುಲಕರ್ಣಿ, ಮನೋಹರರಾವ್ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ಹನುಮಂತಾಚಾರ್ ಮಸ್ಕಿ, ಭೀಮಾಚಾರ್ ಪುರೋಹಿತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಧನೂರು: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬ್ರಾಹ್ಮಣ ಸಮಾಜದ ನಗರಸಭೆ ಸದಸ್ಯೆ ಸರಿತಾ ವೆಂಕಟೇಶ ಬಂಡಿ ಅವರಿಗೆ ನೀಡಬೇಕು ಎಂದು ಬ್ರಾಹ್ಮಣ ಸಮಾಜದ ಮುಖಂಡರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಮಾಡಿದರು.</p>.<p>ಅಧ್ಯಕ್ಷ ಗೋವಿಂದರಾವ್ ಮಾತನಾಡಿ, ಸಿಂಧನೂರು ಪುರಸಭೆ ಹಾಗೂ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಒಮ್ಮೆಯೂ ಬ್ರಾಹ್ಮಣ ಸಮಾಜದ ಸದಸ್ಯರಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ನೀಡಿಲ್ಲ. ಈ ಭಾರಿ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಒಂದನ್ನಾದರು ನಮ್ಮ ಸಮುದಾಯಕ್ಕೆ ನೀಡಬೇಕೆಂದು ಕೋರಿದರು.</p>.<p>ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಹ್ಲಾದಗುಡಿ ವಕೀಲ, ರಾಮಕೃಷ್ಣಾಚಾರ್ ಗೋನ್ವಾರ್, ನರಸಿಂಹಾಚಾರ್ ಮಠಾಧಿಕಾರ್, ನರಸಿಂಗ್ರಾವ್ ಚನ್ನಳ್ಳಿ, ವೆಂಕಣ್ಣಚಾರ್ ದೋಟಿಹಾಳ, ಆರ್.ವಿ.ಜೋಷಿ, ಎಂ.ಕೆ.ಗೌರಕರ್, ತಿರುಮಲರಾವ್ ಕುಲಕರ್ಣಿ, ಮನೋಹರರಾವ್ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ಹನುಮಂತಾಚಾರ್ ಮಸ್ಕಿ, ಭೀಮಾಚಾರ್ ಪುರೋಹಿತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>