ರಾಯಚೂರು: ರಾಜ್ಯ ಸರ್ಕಾರ ಜಿಲ್ಲೆಯ ಐವರನ್ನು ವಿವಿಧ ಅಕಾಡೆಮಿಗಳಿಗೆ ಶನಿವಾರ ನೇಮಕ ಮಾಡಿದೆ.
ರಂಗ ಸಮಾಜಕ್ಕೆ ಡಿಂಗ್ರಿ ನರೇಶ, ಕರ್ನಾಟಕ ಬಯಲಾಟ ಅಕಾಡೆಮಿಗೆ ಯಲ್ಲಪ್ಪ ಮಾಸ್ತರ ನವಲಕಲ್, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಭಗತರಾಜ್ ನಿಜಮಕಾರಿ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಗೆ ಖಾಸಿಂ ಮಲ್ಲಿಗೆ ಮಡು ಹಾಗೂ ಕರ್ನಾಟಕ ಜನಪದ ಅಕಾಡೆಮಿಗೆ ರಂಗಪ್ಪ ಮಾಸ್ತರ್ ಅವರನ್ನು ನೇಮಕ ಮಾಡಲಾಗಿದೆ.