<p><strong>ರಾಯಚೂರು</strong>: ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ಶಾಲೆಯ ಪಕ್ಕದ ರಾಮಕೃಷ್ಣ ಆಶ್ರಮದ ವ್ಯಕ್ತಿಯೊಬ್ಬರು ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.</p><p>ಕೊಪ್ಪಳ ಮೂಲದ ಬಾಲಕ ಶ್ರವಣಕುಮಾರನಿಗೆ ಆಶ್ರಮದ ಉಸ್ತುವಾರಿ ಪಿ. ವೇಣುಗೋಪಾಲ ಮನಬಂದಂತೆ ಹೊಡೆದು ಚಿತ್ರಹಿಂಸೆ ನೀಡಿದ್ದಲ್ಲದೇ ಕತ್ತಲ ಕೋಣೆಯಲ್ಲಿ ಹಾಕಿ ವಿಕೃತಿ ಮೆರೆದಿದ್ದಾನೆ.</p><p>ಶುಕ್ರವಾರ ಸಂಜೆ ಮಗನನ್ನು ನೋಡಲು ಬಂದಿದ್ದ ತಾಯಿಗೆ ವಿಷಯ ಗೊತ್ತಾಗಿದೆ. ತೊಡೆಗಳು ಹಾಗೂ ಕಣ್ಣಿನ ಗುಡ್ಡೆಗಳ ಮೇಲೆ ಬಲವಾದ ಗಾಯದ ಗುರುತುಗಳಾಗಿವೆ. ನೋವಿನಿಂದ ನರಳುತ್ತಿದ್ದ ಮಗುವನ್ನು ತಾಯಿ ತಕ್ಷಣ ನಗರದ ಚಂದ್ರಬಂಡ ಮಾರ್ಗದಲ್ಲಿರುವ ಜನತಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. </p><p>ನಂತರ ಬಾಲಕನ ತಾಯಿ ರಾತ್ರಿ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಬೆಳಿಗ್ಗೆ ಬರುವಂತೆ ಹೇಳಿ ಕಳಿಸಿದ್ದರು. ಹೀಗಾಗಿ ಪೊಲೀಸರು ಸ್ಪಂದಿಸಿಲ್ಲ ಎನ್ನುವ ಸುದ್ದಿ ರಾತ್ರಿ ವಾಟ್ಸ್ ಆ್ಯಪ್ನಲ್ಲಿ ಹರಿದಾಡಿದೆ.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಆಶ್ರಮದ ಉಸ್ರುವಾರಿ ಪಿ. ವೇಣುಗೋಪಾಲ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ಶಾಲೆಯ ಪಕ್ಕದ ರಾಮಕೃಷ್ಣ ಆಶ್ರಮದ ವ್ಯಕ್ತಿಯೊಬ್ಬರು ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.</p><p>ಕೊಪ್ಪಳ ಮೂಲದ ಬಾಲಕ ಶ್ರವಣಕುಮಾರನಿಗೆ ಆಶ್ರಮದ ಉಸ್ತುವಾರಿ ಪಿ. ವೇಣುಗೋಪಾಲ ಮನಬಂದಂತೆ ಹೊಡೆದು ಚಿತ್ರಹಿಂಸೆ ನೀಡಿದ್ದಲ್ಲದೇ ಕತ್ತಲ ಕೋಣೆಯಲ್ಲಿ ಹಾಕಿ ವಿಕೃತಿ ಮೆರೆದಿದ್ದಾನೆ.</p><p>ಶುಕ್ರವಾರ ಸಂಜೆ ಮಗನನ್ನು ನೋಡಲು ಬಂದಿದ್ದ ತಾಯಿಗೆ ವಿಷಯ ಗೊತ್ತಾಗಿದೆ. ತೊಡೆಗಳು ಹಾಗೂ ಕಣ್ಣಿನ ಗುಡ್ಡೆಗಳ ಮೇಲೆ ಬಲವಾದ ಗಾಯದ ಗುರುತುಗಳಾಗಿವೆ. ನೋವಿನಿಂದ ನರಳುತ್ತಿದ್ದ ಮಗುವನ್ನು ತಾಯಿ ತಕ್ಷಣ ನಗರದ ಚಂದ್ರಬಂಡ ಮಾರ್ಗದಲ್ಲಿರುವ ಜನತಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. </p><p>ನಂತರ ಬಾಲಕನ ತಾಯಿ ರಾತ್ರಿ ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಬೆಳಿಗ್ಗೆ ಬರುವಂತೆ ಹೇಳಿ ಕಳಿಸಿದ್ದರು. ಹೀಗಾಗಿ ಪೊಲೀಸರು ಸ್ಪಂದಿಸಿಲ್ಲ ಎನ್ನುವ ಸುದ್ದಿ ರಾತ್ರಿ ವಾಟ್ಸ್ ಆ್ಯಪ್ನಲ್ಲಿ ಹರಿದಾಡಿದೆ.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಆಶ್ರಮದ ಉಸ್ರುವಾರಿ ಪಿ. ವೇಣುಗೋಪಾಲ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>