ತಾಲ್ಲೂಕಿನ ಸಗಮಕುಂಟ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳ ಯುವಕ ಸಂಘದ ಪದಾಧಿಕಾರಿಗಳು ಸ್ತಂಭವನ್ನು ನಿರ್ಮಿಸಿದ್ದರು. ಆದರೆ ರಾತ್ರೋ ರಾತ್ರಿ ಕೆಲ ಕಿಡಿಗೇಡಿಗಳು ಅದನ್ನು ಧ್ವಂಸಗೊಳಿಸಿ ಅಪಮಾನ ಮಾಡಿದ್ದು ಖಂಡನೀಯ. ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಾದಿಗ ಜಾಗೃತಿ ಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರ ಬೋರೆಡ್ಡಿ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ, ಡಾ.ಬಿ.ಆರ್.ಯುವ ಘರ್ಜನೆ ಸೇನೆ ಅಧ್ಯಕ್ಷ ತಿಮ್ಮಪ್ಪ ಗಂಜಹಳ್ಳಿ ಆಗ್ರಹಿಸಿದ್ದಾರೆ.