<p><strong>ಮಾನ್ವಿ:</strong> ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಘಟಕದ ಆವರಣದಲ್ಲಿ ಭಾನುವಾರ ಚಾಲಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.</p>.<p>ಘಟಕದ ವ್ಯವಸ್ಥಾಪಕ ನಾಗರಾಜ ಮಾತನಾಡಿ,‘ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಶಕ್ತಿ ಯೋಜನೆ, ವಿದ್ಯಾರ್ಥಿಗಳ ಉಚಿತ ಬಸ್ಪಾಸ್ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಚಾಲಕರು ನಿಗದಿತ ವೇಗದಲ್ಲಿ ರಸ್ತೆಯಲ್ಲಿ ಸುರಕ್ಷಿತವಾಗಿ ಬಸ್ ಚಾಲನೆ ಮಾಡುವುದು ಮುಖ್ಯ’ ಎಂದರು.</p>.<p>ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ವಕೀಲ ಮಾತನಾಡಿದರು.</p>.<p>2025–26 ನೇ ಸಾಲಿನಲ್ಲಿ ಸುರಕ್ಷಿತ ಚಾಲನೆಗಾಗಿ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.</p>.<p>ಮಹಿಳಾ ಸಿಬ್ಬಂದಿ, ಚಾಲಕರಿಗೆ ಸಿಂಧೂರ ಹಚ್ಚಿ ಆರತಿ ಬೆಳಗಿ ಶುಭ ಕೋರಿದರು.</p>.<p>ಅಶ್ವಿನಿ ಆಸ್ಪತ್ರೆ ವೈದ್ಯೆ ಡಾ.ರಮ್ಯಾ ವೀರವಲ್ಲಿ, ಮಾನ್ವಿ ಪೊಲೀಸ್ ಠಾಣೆಯ ಎಎಸ್ಐ ಮಲ್ಲರೆಡ್ಡಿ, ಸಿರಾಜುದ್ದೀನ್, ಎಂ.ವೈ.ಜಬಲದ್, ಬಸವರಾಜ ಗಡ್ಡಿ, ಚಾಲಕರು, ನಿರ್ವಾಹಕರು, ದುರಸ್ತಿದಾರರು, ನಿಯಂತ್ರಕರು ಉಪಸ್ಥಿತರಿದ್ದರು.</p>
<p><strong>ಮಾನ್ವಿ:</strong> ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಘಟಕದ ಆವರಣದಲ್ಲಿ ಭಾನುವಾರ ಚಾಲಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.</p>.<p>ಘಟಕದ ವ್ಯವಸ್ಥಾಪಕ ನಾಗರಾಜ ಮಾತನಾಡಿ,‘ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಶಕ್ತಿ ಯೋಜನೆ, ವಿದ್ಯಾರ್ಥಿಗಳ ಉಚಿತ ಬಸ್ಪಾಸ್ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ. ಚಾಲಕರು ನಿಗದಿತ ವೇಗದಲ್ಲಿ ರಸ್ತೆಯಲ್ಲಿ ಸುರಕ್ಷಿತವಾಗಿ ಬಸ್ ಚಾಲನೆ ಮಾಡುವುದು ಮುಖ್ಯ’ ಎಂದರು.</p>.<p>ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ವಕೀಲ ಮಾತನಾಡಿದರು.</p>.<p>2025–26 ನೇ ಸಾಲಿನಲ್ಲಿ ಸುರಕ್ಷಿತ ಚಾಲನೆಗಾಗಿ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು.</p>.<p>ಮಹಿಳಾ ಸಿಬ್ಬಂದಿ, ಚಾಲಕರಿಗೆ ಸಿಂಧೂರ ಹಚ್ಚಿ ಆರತಿ ಬೆಳಗಿ ಶುಭ ಕೋರಿದರು.</p>.<p>ಅಶ್ವಿನಿ ಆಸ್ಪತ್ರೆ ವೈದ್ಯೆ ಡಾ.ರಮ್ಯಾ ವೀರವಲ್ಲಿ, ಮಾನ್ವಿ ಪೊಲೀಸ್ ಠಾಣೆಯ ಎಎಸ್ಐ ಮಲ್ಲರೆಡ್ಡಿ, ಸಿರಾಜುದ್ದೀನ್, ಎಂ.ವೈ.ಜಬಲದ್, ಬಸವರಾಜ ಗಡ್ಡಿ, ಚಾಲಕರು, ನಿರ್ವಾಹಕರು, ದುರಸ್ತಿದಾರರು, ನಿಯಂತ್ರಕರು ಉಪಸ್ಥಿತರಿದ್ದರು.</p>