<p><strong>ರಾಯಚೂರು:</strong> ‘ಕೌನ್ ಬನೇಗಾ ಕರೋಡಪತಿ’ ರಿಯಾಲಿಟಿ ಷೋ ಲಕ್ಕಿ ಡ್ರಾಗೆ ಆಯ್ಕೆ ಆಗಿರುವುದಾಗಿ ದೂರವಾಣಿ ಕರೆ ಮೂಲಕ ನಗರದ ಯುವತಿಯನ್ನು ನಂಬಿಸಿ ₹2,69,050 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಂಚಕರನ್ನು ಪತ್ತೆ ಮಾಡುವಂತೆ ವಂಚನೆಗೊಳಗಾದ ಯುವತಿ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.</p>.<p>ಮನೆಗೆಲಸ ಮಾಡಿಕೊಂಡಿದ್ದ ಆಶ್ರಯ ಕಾಲೋನಿ ನಿವಾಸಿ ನಸೀಮಾ ಮೆಹಬೂಬ್ ವಂಚನೆಗೊಳಗಾದ ಯುವತಿ. ಕೆಬಿಸಿ ಲಕ್ಕಿ ಡ್ರಾ ₹25 ಲಕ್ಷ ಬಹುಮಾನಕ್ಕೆ ಆಯ್ಕೆ ಆಗಿರುವ ಬಗ್ಗೆ ಮೊಬೈಲ್ ಮೊದಲು ಸಂದೇಶ ಬಂದಿತ್ತು. ಆನಂತರ ಕರೆಮಾಡಿದ ವಂಚಕ, ವಿಜಯಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಹುಮಾನ ಪಡೆಯಲು ₹8,050 ಜಮಾಗೊಳಿಸುವಂತೆ ಆರಂಭದಲ್ಲಿ ತಿಳಿಸಿದ್ದ.</p>.<p>ಯುವತಿಯು ವಂಚಕನ ಮಾತು ನಂಬಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಹೇಳಿದಷ್ಟು ಹಣ ಜಮೆ ಮಾಡುತ್ತಾ ಬಂದಿದ್ದಾರೆ. ಆನಂತರ ವಂಚನೆಗೊಳಗಾಗಿದ್ದು ಅರಿವಿಗೆ ಬಂದು ದೂರು ಸಲ್ಲಿಸಿದ್ದಾರೆ.</p>.<p>ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆ ಕಾರ್ಯ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ‘ಕೌನ್ ಬನೇಗಾ ಕರೋಡಪತಿ’ ರಿಯಾಲಿಟಿ ಷೋ ಲಕ್ಕಿ ಡ್ರಾಗೆ ಆಯ್ಕೆ ಆಗಿರುವುದಾಗಿ ದೂರವಾಣಿ ಕರೆ ಮೂಲಕ ನಗರದ ಯುವತಿಯನ್ನು ನಂಬಿಸಿ ₹2,69,050 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವಂಚಕರನ್ನು ಪತ್ತೆ ಮಾಡುವಂತೆ ವಂಚನೆಗೊಳಗಾದ ಯುವತಿ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.</p>.<p>ಮನೆಗೆಲಸ ಮಾಡಿಕೊಂಡಿದ್ದ ಆಶ್ರಯ ಕಾಲೋನಿ ನಿವಾಸಿ ನಸೀಮಾ ಮೆಹಬೂಬ್ ವಂಚನೆಗೊಳಗಾದ ಯುವತಿ. ಕೆಬಿಸಿ ಲಕ್ಕಿ ಡ್ರಾ ₹25 ಲಕ್ಷ ಬಹುಮಾನಕ್ಕೆ ಆಯ್ಕೆ ಆಗಿರುವ ಬಗ್ಗೆ ಮೊಬೈಲ್ ಮೊದಲು ಸಂದೇಶ ಬಂದಿತ್ತು. ಆನಂತರ ಕರೆಮಾಡಿದ ವಂಚಕ, ವಿಜಯಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಹುಮಾನ ಪಡೆಯಲು ₹8,050 ಜಮಾಗೊಳಿಸುವಂತೆ ಆರಂಭದಲ್ಲಿ ತಿಳಿಸಿದ್ದ.</p>.<p>ಯುವತಿಯು ವಂಚಕನ ಮಾತು ನಂಬಿ ಸೆಪ್ಟೆಂಬರ್ 23 ರಿಂದ 29 ರವರೆಗೆ ಹೇಳಿದಷ್ಟು ಹಣ ಜಮೆ ಮಾಡುತ್ತಾ ಬಂದಿದ್ದಾರೆ. ಆನಂತರ ವಂಚನೆಗೊಳಗಾಗಿದ್ದು ಅರಿವಿಗೆ ಬಂದು ದೂರು ಸಲ್ಲಿಸಿದ್ದಾರೆ.</p>.<p>ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆ ಕಾರ್ಯ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>