ರಾಯಚೂರಿನ ಆರ್ ಟಿಪಿಎಸ್ ಹಾಗೂ ವೈಟಿಪಿಎಸ್ ವಿದ್ಯುತ್ ಘಟಕದ ಮೂಲಕ ರಾಜ್ಯದ ಶೇ 50 ರಷ್ಟು ಭಾಗಕ್ಕೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಕಲ್ಲಿದ್ದಲು ಕದ್ದು ಮಾರಾಟ ಮಾಡುವುದರಿಂದ ವಿದ್ಯುತ್ ಉತ್ಪಾದನೆ ಕೊರತೆಯಾಗಿ ರಾಜ್ಯದ ಜನರಿಗೆ ಸಮಸ್ಯೆಯಾಗುತ್ತದೆ ಕೂಡಲೇ ಜಿಲ್ಲಾಡಳಿತ ಇದನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರಾದ ಎನ್.ಕೃಷ್ಣ, ರಂಗಪ್ಪ ಅಸ್ಕಿಹಾಳ, ಆನಂದ ಏಗನೂರು, ಗೋವಿಂದ ಮೇಸ್ತ್ರಿ ಆಗ್ರಹಿಸಿದ್ದಾರೆ.