‘2024ರ ಫೆಬ್ರುವರಿ 19ರಂದು ಪ್ರಜಾವಾಣಿಯಲ್ಲಿ ‘ದೇವರು, ಮಠ ಹೆಸರಲ್ಲಿ ಶಾಲಾ ಕಾಲೇಜು ಜಾಗ ಅತಿಕ್ರಮಣ‘ ಶೀರ್ಷಿಕೆ ಅಡಿಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಪದವಿ ಕಾಲೇಜಿನ ಸಿಬ್ಬಂದಿ ಪತ್ರಿಕೆಗೆ ನೀಡಿದ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾವು ಕಾಲೇಜಿನ ಯಾವುದೇ ಜಾಗ ಒತ್ತುವರಿ ಮಾಡಿಲ್ಲ. 2018 ರಲ್ಲಿ ಮಠದ ಜಾಗದಲ್ಲಿ ಅಕ್ರಮವಾಗಿ ಆವರಣ ಗೋಡೆ ನಿರ್ಮಿಸಲು ಬಂದಾಗ ನಾನೇ ಅವರ ವಿರುದ್ಧ ದೂರು ಕೊಟ್ಟಿದ್ದೆ. ನಂತರ ಲೋಕೋಪಯೋಗಿ ಇಲಾಖೆಯವರು ಕಾಮಗಾರಿಯ ಟೆಂಡರ್ ರದ್ದುಪಡಿಸಿದರು‘ ಎಂದು ತಿಳಿಸಿದ್ದಾರೆ.