ಕೋಮು ಸೌಹಾರ್ದತೆ, ಸ್ವಾತಂತ್ರ್ಯ ಮತ್ತು ಸಮಾನತೆ-ಸಹಬಾಳ್ವೆ ಪ್ರೀತಿಸುವ ಎಲ್ಲರನ್ನು ಒಗ್ಗೂಡಿಸಲು ಬಹುತ್ವ ಭಾರತ ಕಟ್ಟುವ ಮನಸುಳ್ಳ ಎಲ್ಲಾ ಸಂಘಟನೆಗಳು ಬೇಧ ಬಿಟ್ಟು ಸ್ವಯಂಪ್ರೇರಿತವಾಗಿ ಸಮಾವೇಶದಲ್ಲಿ ನದಿಗಳಂತೆ ಹರಿದು ಬಂದು ಸಮುದ್ರದಂತೆ ಸೇರಿ ಇಡೀ ರಾಷ್ಟ್ರಕ್ಕೆ ಭಾವೈಕ್ಯತೆಯ ಸಂದೇಶ ಸಾರಲಾಗುವುದು. ಆದ್ದರಿಂದ ಪ್ರತಿಯೊಬ್ಬರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಕೆ. ಜಿಲಾನಿಪಾಷಾ, ಖಾದರಸುಭಾನಿ, ಡಿ.ಎಚ್.ಪೂಜಾರ, ಎಂ.ಡಿ.ನದೀಮುಲ್ಲಾ, ಹನುಮಂತ ಗೋಮರ್ಸಿ, ನಿರುಪಾದೆಪ್ಪ ಗುಡಿಹಾಳ, ಎಂ.ಗಂಗಾಧರ, ದುರುಗಪ್ಪ ರೌಡಕುಂದ, ಗುಡದೇಶ ಭೇರ್ಗಿ, ಹೆಚ್.ಎನ್.ಬಡಿಗೇರ ಮಾತನಾಡಿದರು. ಹಸೇನಸಾಬ, ಪೂಜಪ್ಪ ಪೂಜಾರಿ, ಶಬ್ಬೀರ್, ಬಿ.ಲಿಂಗಪ್ಪ, ನರಸಪ್ಪ ಕಟ್ಟಿಮನಿ, ದೌಲಸಾಬ ದೊಡ್ಡಮನಿ, ಯಲ್ಲಪ್ಪ ಗೋಮರ್ಸಿ, ಎಂ.ಎಸ್.ರಾಜಶೇಖರ, ನಿರುಪಾದಿ ಸಾಸಲಮರಿ, ಶರಣು ಮಲ್ಲಾಪೂರ, ರಮೇಶ ಭೇರ್ಗಿ ಇದ್ದರು.